News Karnataka Kannada
Saturday, May 04 2024
ದೇಶ

ಜಿಎಸ್‌ಟಿ: ಕ್ಷಮಾದಾನ ಗಡುವು ವಿಸ್ತರಿಸಿದ ಕೇಂದ್ರ ಹಣಕಾಸು ಸಚಿವಾಲಯ

Gst 30082021
Photo Credit :

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಮಾಸಿಕ ವಿವರಗಳನ್ನು ತಡವಾಗಿ ಸಲ್ಲಿಸಿದವರು ಕಡಿಮೆ ಮೊತ್ತದ ದಂಡ ಪಾವತಿಸಿ ಕ್ಷಮಾದಾನ ಪಡೆದುಕೊಳ್ಳುವ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವಾಲಯವು ನವೆಂಬರ್ 30ರವರೆಗೆ ವಿಸ್ತರಿಸಿದೆ.

ವಿವರ ಸಲ್ಲಿಸುವುದನ್ನು ಬಾಕಿ ಇರಿಸಿಕೊಂಡವರು ಕಡಿಮೆ ಮೊತ್ತದ ದಂಡ ಪಾವತಿಸಿ ಕ್ಷಮಾದಾನ ಪಡೆಯುವ ಯೋಜನೆಯನ್ನು ಜಾರಿಗೆ ತರಲು ಜಿಎಸ್‌ಟಿ ಮಂಡಳಿಯು ಮೇ ತಿಂಗಳಿನಲ್ಲಿ ತೀರ್ಮಾನಿಸಿತ್ತು.

ತೆರಿಗೆ ಪಾವತಿಸಬೇಕಾಗಿಲ್ಲದವರು 2017ರ ಜುಲೈನಿಂದ 2021ರ ಏಪ್ರಿಲ್‌ವರೆಗಿನ ಜಿಎಸ್‌ಟಿಆರ್‌–3ಬಿ ವಿವರ ಸಲ್ಲಿಸುವುದು ಬಾಕಿ ಇದ್ದರೆ, ಪ್ರತಿ ವಿವರಕ್ಕೆ ₹ 500 ದಂಡ ಪಾವತಿಸಬೇಕು. ತೆರಿಗೆ ಪಾವತಿಸಬೇಕಾದವರು ವಿವರ ಸಲ್ಲಿಸುವುದನ್ನು ಬಾಕಿ ಇರಿಸಿಕೊಂಡಿದ್ದರೆ, ಪ್ರತಿ ವಿವರಕ್ಕೆ ₹ 1,000 ದಂಡ ಪಾವತಿಸಬೇಕು. ಬಾಕಿ ಇರುವ ವಿವರಗಳನ್ನು ಆಗಸ್ಟ್‌ 31ರೊಳಗೆ ಸಲ್ಲಿಸಬೇಕಿತ್ತು.

‘ಈಗ ಈ ಸೌಲಭ್ಯ ಪಡೆಯಲು ಇರುವ ಕಡೆಯ ದಿನಾಂಕವನ್ನು ಆಗಸ್ಟ್‌ 31ರ ಬದಲಿಗೆ ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು