ಹೊಸದಿಲ್ಲಿ: ಕೋವಿಡ್ದಿಂದ ಮೃತಪಟ್ಟಿರುವವರ ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡುವ ಕೇಂದ್ರ ಸರಕಾರದ ಸೂತ್ರಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ.
ಅರ್ಜಿ ಸಲ್ಲಿಕೆಯಾದ 30 ದಿನಗಳ ಒಳಗಾಗಿ ಪರಿಹಾರ ಮೊತ್ತವನ್ನು ಸಂಬಂಧಿ ತರಿಗೆ ನೀಡಬೇಕು. ರಾಜ್ಯ ಸರಕಾರಗಳು ತಮ್ಮ ವಿಪತ್ತು ಪರಿಹಾರ ನಿಧಿಯಿಂದ ಈ ಮೊತ್ತ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಮಾಧ್ಯಮಗಳಲ್ಲಿ ಪರಿಹಾರ ನೀಡುವ ಯೋಜನೆ ಬಗ್ಗೆ ಭಾರಿ ಪ್ರಚಾರ ನೀಡಬೇಕು. ಮರಣ ಪ್ರಮಾಣ ಪತ್ರದಲ್ಲಿ ಸಾವಿಗೆ ಕಾರಣ ನಮೂದು ಮಾಡದೇ ಇದ್ದರೂ, ಪರಿಹಾರ ಮೊತ್ತ ನಿರಾಕರಿಸುವಂತಿಲ್ಲ ಎಂದೂ ಸೂಚಿಸಿದೆ.