ಹೊಸದಿಲ್ಲಿ: ಆಫ್ಘಾನಿಸ್ತಾನ ಸೈನಿಕರು ಹಾಗೂ ತಾಲಿಬಾನ್ ಉಗ್ರರ ನಡುವಿನ ಘರ್ಷಣೆ ವೇಳೆ ಭಾರತದ ಫೋಟೊ ಜರ್ನಲಿಸ್ಟ್ ಹಾಗೂ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಡ್ಯಾನಿಷ್ ಸಿದ್ದಿಖ್ ಹತ್ಯೆಯಾಗಿದ್ದಾರೆ.
ಸಿದ್ದಿಖ್ ಅವರು ರಾಯಿಟರ್ಸ್ ಸುದ್ದಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಫ್ಘಾನಿಸ್ತಾನದ ಕಂದಹಾರ್ನಲ್ಲಿ ಸೈನಿಕರು ಹಾಗೂ ಉಗ್ರರ ನಡುವೆ ಹಲವು ದಿನಗಳಿಂದ ನಡೆಯುತ್ತಿರುವ ಘರ್ಷಣೆ ವರದಿ ಮಾಡುವಾದ ಗುಂಡು ತಗುಲಿ ಮೃಪಟ್ಟಿದ್ದಾರೆ. ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದ ಗಡಿ ಭಾಗವಾದ ಸ್ಪಿನ್ ಬಾಲ್ಡಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ʻಕಳೆದ ರಾತ್ರಿ ಕಂದಹಾರ್ನಲ್ಲಿ ಮಿತ್ರ ಡ್ಯಾನಿಷ್ ಸಿದ್ದಿಖ್ ಅವರ ಹತ್ಯೆಯಾದ ಸುದ್ದಿ ತಿಳಿದು ದುಃಖವಾಯಿತು. ಭಾರತದ ಪತ್ರಕರ್ತ ಹಾಗೂ ಪುಲಿಟ್ಜರ್ ಪ್ರಶಸ್ತಿ ವಿಜೇತರಾದ ಸಿದ್ದಿಖ್ ಅಫ್ಘಾನ್ನ ಭದ್ರತಾ ಪಡೆಗಳೊಂದಿಗೆ ಇದ್ದರು. ಎರಡು ವಾರಗಳ ಹಿಂದೆಯಷ್ಟೇ ಕಾಬೂಲ್ನಿಂದ ನಿರ್ಗಮಿಸುವಾಗ ಅವರನ್ನು ಭೇಟಿಯಾಗಿದ್ದೆʼ ಎಂದು ಭಾರತ-ಅಫ್ಘಾನಿಸ್ತಾನದ ರಾಯಭಾರಿ ಫರಿದ್ ಮಮುಂಝಾ ಅವರು ಸಂತಾಪ ಸೂಚಿಸಿದ್ದಾರೆ.
ಅಫ್ಘಾನ್ ಸೈನಿಕರೊಂದಿಗೆ ಸಿದ್ದಿಖ್ ಇದ್ದರು. ಘರ್ಷಣೆಗೆ ಸಂಬಂಧಿಸಿದ ಹಲವಾರು ವಿಡಿಯೊಗಳನ್ನು ಚಿತ್ರೀಕರಿಸಿ ಹಂಚಿಕೊಂಡಿದ್ದರು.
ಕಂದಹಾರ್ನಲ್ಲಿ ಆಫ್ಘನ್ ಉಗ್ರರ ಗುಂಡಿಗೆ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೋ ಜರ್ನಲಿಸ್ಟ್ ಬಲಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.