News Karnataka Kannada
Friday, May 03 2024
ದೇಶ

ಇಬ್ಬರು ಯುಎಲ್ ಬಿ ಉಗ್ರರನ್ನು ಗುಂಡಿಕ್ಕಿ ಕೊಂದ ಪೊಲೀಸರು ಅಸ್ಸಾಂ – ಎನ್ ಕೌಂಟರ್

Indain Army
Photo Credit :

ಅಸ್ಸಾಂ :ಕೊಕ್ರಜಾರ್ ಜಿಲ್ಲೆಯ ಉಲ್ತಪನಿ ಮೀಸಲು ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದೆ. ಪೊಲೀಸರು ಉಗ್ರಗಾಮಿ ಗುಂಪಿನ ಶಿಬಿರವನ್ನು ಭೇದಿಸಿದ್ದರು ಮತ್ತು ಆ ಪ್ರದೇಶದಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಗ್ರೆನೇಡ್ ಗಳು ಮತ್ತು ಇತರ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡಿದ್ದರು.ಅಸ್ಸಾಂ ಪೊಲೀಸರ ಡಾ. ಎಲ್.ಆರ್.ಬಿಸ್ನೋಯ್ ವಿಶೇಷ ಡಿಜಿ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಕೊಕ್ರಜಾರ್ ಜಿಲ್ಲೆಯ ಪೊಲೀಸ್ ತಂಡ ಕಾರ್ಯಾಚರಣೆ ಆರಂಭಿಸಿದೆ.

ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಪೊಲೀಸರೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಹೊಸದಾಗಿ ಮೂಡಿದ ಯುನೈಟೆಡ್ ಲಿಬರೇಷನ್ ಆಫ್ ಬೋಡೋಲ್ಯಾಂಡ್ (ULB) ಗುಂಪಿನ ಇಬ್ಬರು ಉಗ್ರರು ಹತರಾದರು.

‘ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಮೀಸಲು ಅರಣ್ಯ ಪ್ರದೇಶದ ಒಳಗೆ ಸ್ಥಾಪಿಸಲಾದ ಶಿಬಿರದಲ್ಲಿ ಉಗ್ರರು ಆಶ್ರಯ ಪಡೆದಿದ್ದರು. ಪೊಲೀಸ್ ತಂಡ ಆ ಪ್ರದೇಶವನ್ನು ತಲುಪಿದಾಗ, ಉಗ್ರರು ಗುಂಡು ಹಾರಿಸಲು ಪ್ರಾರಂಭಿಸಿದರು ಮತ್ತು ಪೊಲೀಸ್ ಸಿ…
ಅಸ್ಸಾಂ : ಕೊಕ್ರಜಾರ್ ಜಿಲ್ಲೆಯ ಉಲ್ತಪನಿ ಮೀಸಲು ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದೆ. ಪೊಲೀಸರು ಉಗ್ರಗಾಮಿ ಗುಂಪಿನ ಶಿಬಿರವನ್ನು ಭೇದಿಸಿದ್ದರು ಮತ್ತು ಆ ಪ್ರದೇಶದಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಗ್ರೆನೇಡ್ ಗಳು ಮತ್ತು ಇತರ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡಿದ್ದರು.

ಅಸ್ಸಾಂ ಪೊಲೀಸರ ಡಾ. ಎಲ್.ಆರ್.ಬಿಸ್ನೋಯ್ ವಿಶೇಷ ಡಿಜಿ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಕೊಕ್ರಜಾರ್ ಜಿಲ್ಲೆಯ ಪೊಲೀಸ್ ತಂಡ ಕಾರ್ಯಾಚರಣೆ ಆರಂಭಿಸಿದೆ ಎಂದು ಹೇಳಿದರು.

ಪೊಲೀಸ್ ತಂಡವು ಎನ್ ಕೌಂಟರ್ ಸ್ಥಳದಿಂದ ಎರಡು ಪಿಸ್ತೂಲ್ ಗಳು (9 ಮಿಮೀ ಮತ್ತು 7.65 ಮಿ.ಮೀ), ಎಂಟು ಸುತ್ತಿನ ಜೀವಂತ ಮದ್ದುಗುಂಡುಗಳು, 14 ಸುತ್ತುಖಾಲಿ ಕಾರ್ಟ್ರಿಡ್ಜ್ ಗಳು, ಎಂಟು ಹ್ಯಾಂಡ್ ಗ್ರೆನೇಡ್ ಗಳು ಮತ್ತು ಇತರ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು