ನವ ದೆಹಲಿ ; ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಧಾನ್ಯಗಳಲ್ಲಿ ಸಂಗ್ರಹಣೆಯ ಸಮಯದಲ್ಲಿ ಹಾನಿಯಿಂದಾಗಿ ಭಾರತವು 406 ಕೋಟಿ ಮೌಲ್ಯದ ಧಾನ್ಯಗಳನ್ನು ಕಳೆದುಕೊಂಡಿದೆ ಎಂದು ಮಾಧ್ಯಮ ವರದಿಗಳ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು, “ಆಹಾರವನ್ನು ವ್ಯರ್ಥ ಮಾಡುವುದು ಕದಿಯುವುದಕ್ಕೆ ಸಮನಾದ ಕೆಲಸ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಾಕಿದ ಪೋಸ್ಟ್ನಲ್ಲಿ, ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಮಾಧ್ಯಮ ವರದಿಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಆ ಸ್ಕ್ರೀನ್ ಶಾಟ್ ಸಂಸತ್ತಿನ ಸ್ಥಾಯಿ ಸಮಿತಿ ವರದಿಯಲ್ಲಿ ಉಲ್ಲೇಖಿಸಿದ ಮಾಹಿತಿಯಾಗಿದ್ದು, ಸರ್ಕಾರ ರೈತರಿಂದ ಸಂಗ್ರಹಿಸಿದ್ದ ಸುಮಾರು 406 ಕೋಟಿ ಮೌಲ್ಯದ ಧಾನ್ಯಗಳನ್ನು ಕಳೆದುಕೊಂಡಿರುವುದನ್ನು ಬಹಿರಂಗಪಡಿಸಿದೆ ಎಂದು ಹೇಳಿದೆ.
“ಆಹಾರವನ್ನು ವ್ಯರ್ಥ ಮಾಡುವುದು ಬಡವರಿಂದ ಕದಿಯುವುದಕ್ಕೆ ಸಮಾನ” ಎಂದು ಗಾಂಧಿ ತಮ್ಮ ಪೋಸ್ಟ್ನಲ್ಲಿ ‘GOIwastes’ ಹ್ಯಾಶ್ಟ್ಯಾಗ್ ಬಳಸಿ ಹೇಳಿದ್ದಾರೆ. ಒಂದು ವರದಿಯಲ್ಲಿ, ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣೆಯ ಸ್ಥಾಯಿ ಸಮಿತಿಯು ಸರ್ಕಾರವು ಆಹಾರ ಧಾನ್ಯಗಳ ಪ್ರಮಾಣ ಎಷ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಆಹಾರ ವ್ಯರ್ಥ ಮಾಡುವುದು ಕಳ್ಳತನಕ್ಕೆ ಸಮನಾಗಿದೆ ಎಂದ ರಾಹುಲ್ ಗಾಂಧಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.