ಬೆಂಗಳೂರು: ಸುಪ್ರಸಿದ್ಧ ಭಾಗವತ ಬಲಿಪ ನಾರಾಯಣ ಭಾಗವತ ಅವರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಲಿಪರ ಜಯಲಕ್ಷ್ಮೀ ಪ್ರಸಂಗ ಸಂಕಲನವು ಪುಸ್ತಕ ಪ್ರಶಸ್ತಿಗೂ ಆಯ್ಕೆಯಾಗಿದೆ. ಈ ಬಗ್ಗೆ ಸೋಮವಾರ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಅವರು ವಿವರ ನೀಡಿದರು.
ಯಲ್ಲಾಪುರದ ಮದ್ದಳೆ ವಾದಕ ಶಂಕರ ಭಾಗವತ, ತಾಳಮದ್ದಲೆ ಅರ್ಥಧಾರಿ ಬಂಟ್ವಾಳ ತಾಲೂಕು ಇರಾ ಗ್ರಾಮದ ಬರೆ ಕೇಶವ ಭಟ್, ಬಡಗುತಿಟ್ಟು ಯಕ್ಷಗಾನ ವಿದ್ವಾಂಸ ಭಾಗವತರಾದ ಕೋಟದ ಎಚ್. ಶ್ರೀಧರ ಹಂದೆ, ಮೂಡಲಪಾಯ ಯಕ್ಷಗಾನ ಭಾಗವತರಾದ ತಿಪಟೂರ್ ತಾಲೂಕು ಅರಳಗುಪ್ಪೆಯ ಎ.ಎಂ. ಶಿವಶಂಕರಯ್ಯ, ಮೂಡಲಪಾಯ ಯಕ್ಷಗಾನ ಕಲಾವಿದ ಬೆಂಗಳೂರು ರಾಜಾಜಿನಗರದ ಕರಿಯಣ್ಣ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.