ದೆಹಲಿ: ‘ಯುದ್ಧ ಪರಿಸ್ಥಿತಿಯಲ್ಲಿ ಇಸ್ರೇಲ್ನಲ್ಲಿ ನೆಲೆಸಿರೋ ಭಾರತೀಯರಿಗೆ ಯಾವುದೇ ತೊಂದರೆ ಆಗಿಲ್ಲ’ ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಇಸ್ರೇಲ್ನಲ್ಲಿ ಸುಮಾರು 18 ಸಾವಿರ ಮಂದಿ ಭಾರತೀಯರಿದ್ದಾರೆ. ಅವರಲ್ಲಿ ಯಾರಿಗೂ ತೊಂದರೆ ಆಗಿರುವ ವರದಿ ಇದುವರೆಗೆ ಇಲ್ಲ. ಉದ್ಯಮಿಗಳು, ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಹಾಗೂ ವಜ್ರದ ವ್ಯಾಪಾರಿಗಳು ಭಾರತದಿಂದ ಬಂದು ಇಸ್ರೇಲ್ನಲ್ಲಿದ್ದಾರೆ.
ಸದ್ಯ ಸಂಘರ್ಷ ಎದುರಾಗಿರೋ ಇವರೆಲ್ಲರೂ ಭಯಭೀತರಾಗಿ ಭಾರತೀಯ ರಾಯಭಾರ ಕಚೇರಿಯನ್ನ ಸಂಪರ್ಕಿಸ್ತಿದ್ದಾರೆ. ಅವರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗ್ತಿದೆ ಎಂದು ತಿಳಿಸಿದೆ. ಶನಿವಾರದಂದು, ಟೆಲ್ ಅವಿವ್ನಲ್ಲಿರುವ ಭಾರತೀಯ ಮಿಷನ್ ಮತ್ತು ಪ್ಯಾಲೆಸ್ಟೈನ್ನಲ್ಲಿರುವ ಭಾರತದ ಪ್ರತಿನಿಧಿ ಕಚೇರಿಯು ಆಯಾ ಕಡೆಯಲ್ಲಿರುವ ಭಾರತೀಯ ಪ್ರಜೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ “ಜಾಗರೂಕರಾಗಿರಿ” ಮತ್ತು “ನೇರವಾಗಿ ಕಚೇರಿಯನ್ನು ಸಂಪರ್ಕಿಸುವಂತೆ” ಸಲಹೆಗಳನ್ನು ನೀಡಿತು.