News Karnataka Kannada
Sunday, May 05 2024
ವಿದೇಶ

ಹೊಸದೊಂದು ರೋಗಕ್ಕೆ ತುತ್ತಾದ 347 ಮಂದಿ, 1 ಸಾವು

Photo Credit :

ಹೊಸದೊಂದು ರೋಗಕ್ಕೆ ತುತ್ತಾದ 347 ಮಂದಿ, 1 ಸಾವು

ಆಂಧ್ರಪ್ರದೇಶ: ಆಂಧ್ರಪ್ರದೇಶದ ಎಲ್ಲೂರು ಎಂಬಲ್ಲಿ ಹೊಸದಾದ ಕಾಯಿಲೆಯೊಂದು ಕಂಡುಬಂದಿದೆ. ಈ ನಿಗೂಢ ಕಾಯಿಲೆ ಈಗಾಗಲೇ 347 ಮಂದಿಯಲ್ಲಿ ಕಾಣಿಸಿಕೊಂಡಿದ್ದು ಒಬ್ಬರು ಇದರಿಂದಾಗಿ ಸಾವನ್ನಪ್ಪಿದ್ದಾರೆ.

ಈ ರೋಗದ ಲಕ್ಷಣಗಳನ್ನು ಗುರುತಿಸಲು ಹಾಗೂ ಪರಿಹಾರವನ್ನು ಕಂಡುಹಿಡಿಯಲು ಮಂಗಳಗಿರಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಂದ ರಕ್ತದ ಮಾದರಿ ಸಂಗ್ರಹಿಸಿದ್ದಾರೆ.

ಕಾಯಿಲೆಗೆ ಗುರಿಯಾದವರಲ್ಲಿ ಕಾಣಿಸಿಕೊಂಡ ಗುಣಲಕ್ಷಣಗಳು ಮೂರ್ಚೆ ಹೋಗುವುದು, ವಾಕರಿ, ಡಿಸೆಂಟ್ರಿ ಹಾಗೂ ನಿಶ್ಯಕ್ತಿ. ರೋಗಿಗಳನ್ನು ರಕ್ತ ಪರೀಕ್ಷೆ, ‘ಸಿ.ಟಿ. ಸ್ಕ್ಯಾನ್‌’ ನಂತರವೂ ಈ ರೋಗಕ್ಕೆ ನಿಕರವಾದ ಕಾರಣ ಪತ್ತೆ ಹಚ್ಚಲು ವೈದ್ಯರಿಗೆ ಇದುವರೆಗೂ ಸಾಧ್ಯವಾಗಿಲ್ಲ.

ಭಾನುವಾರದವರೆಗೆ 292 ಮಂದಿ ಅನಾರೋಗ್ಯಕ್ಕೆ ಗುರಿಯಾಗಿದ್ದರೆ, ಸೋಮವಾರದ ಹೊತ್ತಿಗೆ ಆ ಸಂಖ್ಯೆ 347ಕ್ಕೆ ಅಂದರೆ 45 ಮಂದಿಯಲ್ಲಿ ಹರಡಿದೆ. 200 ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಸೊಳ್ಳೆಗಳ ನಿಯಂತ್ರಿಸಲೆಂದು ಬಳಸಲಾದ ಹೊಗೆಯಿಂದಾಗಿ ಜನರು ಕಾಯಿಲೆ ಬಿದ್ದಿರಬಹುದು ಎಂದು ಅನುಮಾನಿಸಲಾಗಿದೆಯಾದರೂ, ಅದು ಖಚಿತವಾಗಿಲ್ಲ. ಹಲವು ಬಗ್ಗೆಯ ಪರೀಕ್ಷೆಗಳ ನಂತರವೇ ಖಚಿತವಾದ ಕಾರಣ ತಿಳಿಯಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಈ ವಿಷಯವಾಗಿಯೇ ಆಂಧ್ರ ಮುಖ್ಯಮಂತ್ರಿ ವೈ. ಎಸ್ ಜಗನ್‌ಮೋಹನ ರೆಡ್ಡಿ ಎಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯದ ಕುರಿತು ವಿಚಾರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು