News Karnataka Kannada
Saturday, May 04 2024
ವಿದೇಶ

ಹಕ್ಕಿಜ್ವರ ಕಾಡದಂತೆ ರಾಜ್ಯಗಳು ಕಟ್ಟೆಚ್ಚರ

Photo Credit :

ಹಕ್ಕಿಜ್ವರ ಕಾಡದಂತೆ ರಾಜ್ಯಗಳು ಕಟ್ಟೆಚ್ಚರ

ನವದೆಹಲಿ: ಐದು ರಾಜ್ಯಗಳಲ್ಲಿ ಕೋಳಿ, ಕಾಗೆಗಳು, ವಲಸೆ ಹಕ್ಕಿಗಳ ಸಾವು ಸಂಭವಿಸಿದೆ ಎಂಬ ಹಲವಾರು ವರದಿಗಳ ಹಿನ್ನೆಲೆಯಲ್ಲಿ, ಇತರ ರಾಜ್ಯಗಳು ಪಕ್ಷಿಗಳ ಚಲನವಲನ ಮತ್ತು ಅರಣ್ಯ ಪ್ರದೇಶಗಳಲ್ಲಿನ ಅಸಾಮಾನ್ಯ ಸಾವುಗಳ ಬಗ್ಗೆ ನಿಗಾ ಇಡಲು ಜಾಗರೂಕತೆಯನ್ನು ಹೆಚ್ಚಿಸುತ್ತಿವೆ.

ನಿನ್ನೆ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಸುಮಾರು 400 ಪಕ್ಷಿಗಳು ಮೃತಪಟ್ಟಿದ್ದರೆ, ಜಮ್ಮುವಿನ ಉಧಂಪುರ ಜಿಲ್ಲೆಯಲ್ಲಿ 150 ಕಾಗೆಗಳು ಮೃತಪಟ್ಟಿವೆ. ಆದರೂ, ಅವರ ಸಾವಿಗೆ ಕಾರಣವನ್ನು ಇನ್ನೂ ಕಂಡುಹಿಡಿಯಲಿಲ್ಲ. 

ಝಾನ್ಸಿ ಶಾಲೆಯಲ್ಲಿ ನಾಲ್ಕು ಕಾಗೆಗಳು ಸತ್ತಿವೆ. ಲ್ಯಾಬ್ ಪರೀಕ್ಷೆಯು ಈ ಸಂದರ್ಭದಲ್ಲಿ ಏವಿಯನ್ ಇನ್ಫ್ಲುಯೆನ್ಸ ಅಥವಾ ಪಕ್ಷಿ ಜ್ವರ ಸಾವಿಗೆ ಕಾರಣ ಎಂಬುದನ್ನು ತಳ್ಳಿಹಾಕಿದೆ.

ಈ ಮೊದಲು, ಏವಿಯನ್ ಇನ್ಫ್ಲುಯೆನ್ಸದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ರೋಗವನ್ನು ನಿಯಂತ್ರಿಸಲು ರಾಜ್ಯಗಳಿಗೆ ಕ್ರಮಗಳನ್ನು ಸೂಚಿಸಲು ಕೇಂದ್ರವು ರಾಜ್ಯಗಳೊಂದಿಗೆ ಸಭೆ ನಡೆಸಿತ್ತು.

ಇಲ್ಲಿಯವರೆಗೆ ಕೇರಳ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಿಂದ ಏವಿಯನ್ ಸಾವುಗಳು ವರದಿಯಾಗಿವೆ.

ಹಿಮಾಚಲ ಪ್ರದೇಶದಲ್ಲಿ ಸುಮಾರು 1,800 ವಲಸೆ ಹಕ್ಕಿಗಳು ಸಾವನ್ನಪ್ಪಿವೆ. ಅವುಗಳಲ್ಲಿ ಹೆಚ್ಚಿನವು ಬಾರ್-ಹೆಡೆಡ್ ಹೆಬ್ಬಾತುಗಳುಗಳಾಗಿದ್ದು ಪಾಂಗ್ ಅಣೆಕಟ್ಟು ಸಮೀಪ ಅಭಯಾರಣ್ಯದಲ್ಲಿ ಸಾವನಪ್ಪಿವೆ.

ರಾಜಸ್ಥಾನದ ವಿವಿಧ ಜಿಲ್ಲೆಗಳಿಂದ ಸೋಮವಾರ 170 ಕ್ಕೂ ಹೆಚ್ಚು ಹೊಸ ಪಕ್ಷಿಗಳ ಸಾವು ವರದಿಯಾಗಿದ್ದು, ಒಟ್ಟು ಸಾವು 425 ಕ್ಕಿಂತ ಹೆಚ್ಚಾಗಿದೆ.

ಇಂದೋರ್ ನಲ್ಲಿ 15 ಕಾಗೆಗಳು ಸತ್ತಿದ್ದು ಅವುಗಳಲ್ಲಿ 12 ಕಾಗೆಗಳಲ್ಲಿ ಹಕ್ಕಿ ಜ್ವರ ಕಂಡುಬಂದಿದೆ.

ಅರಣ್ಯ ಪ್ರದೇಶಗಳಲ್ಲಿ ಮತ್ತು ಜಲಮೂಲಗಳ ಸುತ್ತಲಿನ ಪ್ರದೇಶದಲ್ಲಿ ಪಕ್ಷಿಗಳಲ್ಲಿ ಯಾವುದೇ ಅಸಾಮಾನ್ಯ ಸಾವು ಸಂಭವಿಸಿದ್ದರೆ ತಕ್ಷಣ ವರದಿ ಮಾಡಲು ರಾಜ್ಯ ಅರಣ್ಯ ಇಲಾಖೆಗಳೊಂದಿಗೆ ಪರಿಣಾಮಕಾರಿ ಸಮನ್ವಯವನ್ನು ಒತ್ತಿಹೇಳಲಾಗಿದೆ ಎಂದು ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
204

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು