ನವದೆಹಲಿ: ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸಾವಿರಾರು ರೂ. ವಂಚಿಸಿ, ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ, ಭಾರತ ಬಿಡುವ ಮೊದಲು ವಿತ್ತ ಸಚಿವರನ್ನು ಭೇಟಿಯಾಗಿದ್ದರಂತೆ.
ದೇಶ ತೊರೆಯುವ ಮೊದಲು ವಿತ್ತ ಸಚಿವರನ್ನು ಭೇಟಿಯಾಗಿ, ಹಣಕಾಸಿನ ವಿಚಾರವನ್ನು ಮುಗಿಸುವಂತೆ ಸೂಚಿಸಿದ್ದೆ. ನನ್ನ ಸೆಟ್ಲ್ ಮೆಂಟ್ ಲೆಟರ್ ಗೆ ಬ್ಯಾಂಕ್ ಗಳು ವಿರೋಧ ವ್ಯಕ್ತಪಡಿಸಿದ್ದವು. ಭಾರತ ಸರ್ಕಾರ ಪರ ವಕೀಲರು ಏನು ಹೇಳುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಕೋರ್ಟ್ ಎಲ್ಲವನ್ನು ನಿರ್ಧರಿಸಲಿದೆ ಎಂದು ಮಲ್ಯ, ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಎದುರು ಮಾಧ್ಯಮದವರಿಗೆ ತಿಳಿಸಿದರು.
ಎಪ್ರಿಲ್ ನಲ್ಲಿ ಲಂಡನ್ ಪೊಲೀಸರು ಬಂಧಿಸಿದ ಬಳಿಕ ಮಲ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.