ಮುಂಬಯಿ: ಕಳೆದ ಕೆಲವು ಸಮಯದಿಂದ ಪಕ್ಷ ವಿರೋಧಿ ಹೇಳಿಕೆ ಹಾಗೂ ಪಕ್ಷದ ನಾಯಕರನ್ನೇ ದೂರುತ್ತಿರುವ ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಮಹಾರಾಷ್ಟ್ರದಲ್ಲಿ ರೈತರ ಪರ ಹೋರಾಟ ನಡೆಸುತ್ತಿದ್ದ ವೇಳೆ ಬಂಧಿಸಲಾಗಿದೆ.
ಸೋಮವಾರ ಯಶವಂತ್ ಸಿನ್ಹಾ ಅವರು ವಿದರ್ಭ ಭಾಗದ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾಗ ಅವರನ್ನು ಬಂಧಿಸಿ ರಾತ್ರಿ ವೇಳೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸಿನ್ಹಾ ಅವರು ರೈತರ ಪರವಾಗಿ ಹೋರಾಟವನ್ನು ಪೊಲೀಸ್ ಠಾಣೆಯಲ್ಲೂ ಮುಂದುವರಿಸಿದರು. ತನ್ನ ಬೇಡಿಕೆಗಳು ಈಡೇರುವ ತನಕ ಪೊಲೀಸ್ ಠಾಣೆಯಿಂದ ಹೊರಹೋಗುವುದಿಲ್ಲವೆಂದು ಬಿಡುಗಡೆ ಬಳಿಕವೂ ಸಿನ್ಹಾ ಪಟ್ಟು ಹಿಡಿದರು ಎಂದು ಪೊಲೀಸ್ ಅಧಿಕಾರಿ ರಾಕೇಶ್ ಕುಲ್ಸಾಗರ ತಿಳಿಸಿದ್ದಾರೆ.