News Karnataka Kannada
Wednesday, May 01 2024
ವಿದೇಶ

ರೈತರ ಪರ ಹೋರಾಟ ನಡೆಸುತ್ತಿದ್ದ ಯಶವಂತ್ ಸಿನ್ಹಾ ಸೆರೆ

Photo Credit :

ರೈತರ ಪರ ಹೋರಾಟ ನಡೆಸುತ್ತಿದ್ದ ಯಶವಂತ್ ಸಿನ್ಹಾ ಸೆರೆ

ಮುಂಬಯಿ: ಕಳೆದ ಕೆಲವು ಸಮಯದಿಂದ ಪಕ್ಷ ವಿರೋಧಿ ಹೇಳಿಕೆ ಹಾಗೂ ಪಕ್ಷದ ನಾಯಕರನ್ನೇ ದೂರುತ್ತಿರುವ ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಮಹಾರಾಷ್ಟ್ರದಲ್ಲಿ ರೈತರ ಪರ ಹೋರಾಟ ನಡೆಸುತ್ತಿದ್ದ ವೇಳೆ ಬಂಧಿಸಲಾಗಿದೆ.

ಸೋಮವಾರ ಯಶವಂತ್ ಸಿನ್ಹಾ ಅವರು ವಿದರ್ಭ ಭಾಗದ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾಗ ಅವರನ್ನು ಬಂಧಿಸಿ ರಾತ್ರಿ ವೇಳೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಿನ್ಹಾ ಅವರು ರೈತರ ಪರವಾಗಿ ಹೋರಾಟವನ್ನು ಪೊಲೀಸ್ ಠಾಣೆಯಲ್ಲೂ ಮುಂದುವರಿಸಿದರು. ತನ್ನ ಬೇಡಿಕೆಗಳು ಈಡೇರುವ ತನಕ ಪೊಲೀಸ್ ಠಾಣೆಯಿಂದ ಹೊರಹೋಗುವುದಿಲ್ಲವೆಂದು ಬಿಡುಗಡೆ ಬಳಿಕವೂ ಸಿನ್ಹಾ ಪಟ್ಟು ಹಿಡಿದರು ಎಂದು ಪೊಲೀಸ್ ಅಧಿಕಾರಿ ರಾಕೇಶ್ ಕುಲ್ಸಾಗರ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು