ನವದೆಹಲಿ: ಭಯೋತ್ಪಾದನೆ ಎನ್ನುವುದು ಕ್ಯಾನ್ಸರ್ ಇದ್ದಂತೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಹೇಳಿದರು.
ತಮ್ಮ ದೇಶದಲ್ಲೇ ಉಗ್ರರನ್ನು ಬೆಳೆಸುತ್ತಿರುವ ಕೆಲವು ದೇಶಗಳು ತಮ್ಮನ್ನು ತಾವು ಬಲಿಪಶುಗಳೆಂದು ಬಿಂಬಿಸಿಕೊಳ್ಳುತ್ತಿವೆ ಎಂದು ಜೈಶಂಕರ್ ಅವರು ಪಾಕಿಸ್ತಾನದ ಮೇಲೆ ವಾಗ್ದಾಳಿ ಮಾಡಿದರು.
ಪಾಕಿಸ್ತಾನದಲ್ಲಿ ಅಡಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೇರಿದಂತೆ 80 ಉಗ್ರರನ್ನು ನಿರ್ಬಂಧಗೊಳಿಸುವ ಪಟ್ಟಿಗೆ ಸೇರಿಸಿದ ಬಳಿಕ ಜೈಶಂಕರ್ ಅವರು ಈ ಹೇಳಿಕೆ ನೀಡಿದರು.