ಕಾಸರಗೋಡು : ಜಿಲ್ಲೆಯ ಪ್ರಮುಖ ಪೇಟೆಗಳಲ್ಲಿ ಒಂದಾದ ಬದಿಯಡ್ಕ ದಲ್ಲಿ ಪ್ರಯಾಣಿಕರಿಗೆ ತಂಗಲು ಬಸ್ಸು ನಿಲ್ದಾಣ ಇಲ್ಲ. ದಿನಂಪ್ರತಿ ಸಾವಿರಾರು ಪ್ರಯಾಣಿಕರು ಆಶ್ರಯಿಸುವ ಪೇಟೆಯಾಗಿದ್ದು, ಮುಳ್ಳೇರಿಯ, ಸುಳ್ಯ,ಪುತ್ತೂರು ಪುತ್ತೂರು, ವಿಟ್ಲ, ಬೆಂಗಳೂರಿಗೆ ತೆರಳುವ ಕೇಂದ್ರ ಬದಿಯಡ್ಕ ಪೇಟೆಯಾಗಿದೆ.
ಸುಮಾರು ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ್ದ ಬಸ್ಸು ನಿಲ್ದಾಣ ಹೊಂದಿದ್ದ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಏಳು ತಿಂಗಳ ಹಿಂದೆ ಕೆಡವಲಾಗಿತ್ತು . ಕಟ್ಟಡ ಶಿಥಿಲಾವಸ್ಥೆಗೆ ತಲಪಿದ ಹಿನ್ನಲೆಯಲ್ಲಿ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಬದಿಯಡ್ಕ ಗ್ರಾಮ ಪಂಚಾಯತ್ ಯೋಜನೆ ಹಾಕಿತ್ತು .
ಆದರೆ ಕಟ್ಟಡ ಕೆಡವಿ ತಿಂಗಳು ಗಳು ಕಳೆದರೂ ಹೊಸ ಕಟ್ಟಡ ಯೋಜನೆ ಜಾರಿಯಾಗಿಲ್ಲ . ಇದರಿಂದ ಬದಿಯಡ್ಕ ಪೇಟೆಗೆ ತಲಪುವ ಪ್ರಯಾಣಿಕರು ತಂಗಲು ವ್ಯವಸ್ಥೆ ಇಲ್ಲದೆ ಸಮಸ್ಯೆಗೆ ಒಳಗಾಗುತ್ತಿದ್ದಾರೆ .
ದಿನಂಪ್ರತಿ ನೂರಕ್ಕೂ ಅಧಿಕ ಬಸ್ಸುಗಳು ಈ ನಿಲ್ದಾಣಕ್ಕೆ ತಲಪುತ್ತಿದೆ . ಬಸ್ಸು ನಿಲ್ದಾಣ ಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳು, ಇತರ ಪ್ರಯಾಣಿಕರು ಮಳೆ , ಬಿಸಿಲನ್ನು ಸಹಿಸಿ ರಸ್ತೆ ಬದಿ ನಿಲ್ಲಬೇಕಾದ ಅನಿವಾರ್ಯ ಸ್ಥಿತಿ ಉಂಟಾಗುತ್ತಿದೆ.
ಕಯ್ಯಾರ ಕಿಞ್ಚ ಣ್ಣ ರೈ ರವರ ಆಡಳಿತಾವಧಿಯಲ್ಲಿ ಬದಿಯಡ್ಕದಲ್ಲಿ ಬಸ್ಸು ನಿಲ್ದಾಣ ವನ್ನು ಒಳಗೊಂಡ ಕಟ್ಟಡವನ್ನು ನಿರ್ಮಿಸಲಾಗಿತ್ತು. ಈ ಕಟ್ಟಡದಲ್ಲಿ ವ್ಯಾಪಾರ ಮಳಿಗೆಗಳು ಕಾರ್ಯಾಚರಿಸುತ್ತಿದ್ದವು . ಆದರೆ ಬದಲಿ ವ್ಯವಸ್ಥೆ ಕೂಡಾ ಸಮರ್ಪಕವಾಗಿಲ್ಲ .
ಪ್ರಮುಖ ಪೇಟೆಗಳಲ್ಲಿ ಬಸ್ಸು ತಂಗುದಾಣದ ಕೊರತೆ ಪ್ರಯಾಣಿಕರನ್ನು , ಜನಸಾಮಾನ್ಯರಿಗೆ ಹಾಗೂ ವರ್ತಕರಿಗೆ ಸಮಸ್ಯೆಯಾಗಿ ಕಾಡುತ್ತಿದೆ