News Karnataka Kannada
Thursday, May 02 2024
ವಿದೇಶ

ಪತ್ನಿ ಮೊಬೈಲ್‌ ಸದಾ ಎಂಗೇಜ್‌ ಆಗಿರುತಿದ್ದುದಕ್ಕೆ ಕೊಲೆ ಮಾಡಿದ ಗಂಡ

Photo Credit :

ಪತ್ನಿ ಮೊಬೈಲ್‌ ಸದಾ ಎಂಗೇಜ್‌ ಆಗಿರುತಿದ್ದುದಕ್ಕೆ  ಕೊಲೆ ಮಾಡಿದ ಗಂಡ

ಕನ್ಯಾಕುಮಾರಿ: ಪತ್ನಿ ಸದಾ ಮೊಬೈಲ್​ನಲ್ಲಿ ಬಿಜಿ ಆಗಿರುವುದನ್ನು ನೋಡಿ ಅನುಮಾನಗೊಂಡ ಪತಿ ಮಹಾಶಯನೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವೆಲ್ಲಿಚಂದೈ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.ಉಮಾ ಕೊಲೆಯಾದ ಮಹಿಳೆ. ರಮೇಶ್​ (42) ಆರೋಪಿ ಪತಿ. ದಂಪತಿಗೆ 11 ವರ್ಷದ ಮಗ ಮತ್ತು 9 ವರ್ಷದ ಮಗಳಿದ್ದಾಳೆ. ರಮೇಶ್​ ದ್ವಿಚಕ್ರ ವಾಹನಗಳಿಗೆ ಸೀಟ್​ ಕವರ್​ ತಯಾರಿಸುವ ಕೆಲಸ ಮಾಡುತ್ತಿದ್ದಾನೆ. ಉಮಾ ಟೈಲರಿಂಗ್​ ಕಲಿತು ಕೆಲಸದಲ್ಲಿ ತೊಡಗಿಕೊಂಡಿದ್ದಳು.
ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಬಟ್ಟೆ ಹೊಲಿಯುವುದೇ ಉಮಾರ ನೆಚ್ಚಿನ ಕಸುಬು ಆಗಿತ್ತು. ಗ್ರಾಹಕರೊಂದಿಗೆ ಮಾತನಾಡುವುದು, ವಾಟ್ಸ್​ಆ್ಯಪ್​ ಮೂಲಕ ಹೊಸ ಹೊಸ ಡಿಸೈನ್​ಗಳನ್ನು ಕಳುಹಿಸಿ ಅವರಿಂದ ಅನುಮತಿ ಪಡೆದುಕೊಳ್ಳುವುದು ಮಾಡುತ್ತಿದ್ದಳು. ತನಗೆ ಬೇಕಾದ ಡಿಸೈನ್​ಗಳನ್ನು ಯೂಟ್ಯೂಬ್​ನಲ್ಲಿ ಹುಡುಕುವ ಅಭ್ಯಾಸವನ್ನು ಉಮಾ ಬೆಳೆಸಿಕೊಂಡಿದ್ದಳು.ಇತ್ತ ಅಂಗಡಿಯಲ್ಲಿ ಇದ್ದಾಗಲೆಲ್ಲ ರಮೇಶ್​, ಉಮಾ ಜತೆಯಲ್ಲಿ ಮಾತನಾಡಲು ಫೋನ್​ ಮಾಡುತ್ತಿದ್ದ. ಆದರೆ, ಬಹುತೇಕ ಸಮಯದಲ್ಲಿ “ನೀವು ಕರೆ ಮಾಡಿರುವ ಚಂದದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ. ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ” ಎಂಬ ಮಾತೊಂದೇ ಕೇಳಿಬರುತ್ತಿತ್ತು.
ಪದೇಪದೆ ಈ ಮಾತನ್ನು ಕೇಳುತ್ತಿದ್ದ ರಮೇಶ್​, ಪತ್ನಿ ಉಮಾ ಮೇಲೆ ಅನುಮಾನ ಪಡಲು ಆರಂಭಿಸಿದ. ಬೇರೋಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿರಬಹುದು ಅಂದುಕೊಂಡು. ಅದಕ್ಕೆ ಪುಷ್ಟಿ ನೀಡುವಂತೆ ಅನೇಕ ಟೈಲರ್​ಗಳು ಅವಳ ಮನೆಗೆ ಬಂದು ಹೋಗುತ್ತಿದ್ದರು. ಅದರಲ್ಲಿ ಪುರುಷ ಟೈಲರ್​​ಗಳು ಸೇರಿಕೊಂಡಿದ್ದರು. ಇದರಿಂದ ಆಕೆಗೆ ಕಿರುಕುಳ ನೀಡಲು ರಮೇಶ್​ ಆರಂಭಿಸಿದ.
ಇಬ್ಬರ ನಡುವೆ ಇದೇ ವಿಷಯಕ್ಕೆ ಗಲಾಟೆ ನಡೆದಾಗ ಉಮಾ ಮನೆಯವರು ಬಂದು ಕೌಟುಂಬಿಕ ವಿವಾದವನ್ನು ಇತ್ಯರ್ಥಪಡಿಸಿ ಹೋಗಿದ್ದರು. ರಮೇಶ್​ಗೆ ಆಪ್ತ ಸಮಾಲೋಚನೆಯನ್ನು ಸಹ ನೀಡಿದ್ದರು. ಆದರೆ, ಪತ್ನಿಯ ಫೋನ್​ ಸದಾ ಬಿಜಿಯಾಗಿರುತ್ತಿದ್ದನ್ನು ನೋಡುತ್ತಿದ್ದ ರಮೇಶ್​ಗೆ ಅನುಮಾನ ಹೋಗಲೇ ಇಲ್ಲ. ಆತ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದ ಎನ್ನಲಾಗಿದೆ.ಹಾಲು ಮಾರಾಟ ಮಾಡುವವನ ಮೇಲೆಯೂ ರಮೇಶ್​ಗೆ ಅನುಮಾನ ಮೂಡಲು ಆರಂಭಿಸಿತು. ಕೊನೆಗೂ ಗಂಡ ವರ್ತನೆಯಿಂದ ಬೇಸತ್ತ ಉಮಾ ಗಂಡನನ್ನು ಬಿಟ್ಟು ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋದಳು. ರಮೇಶ್​, ಗ್ರಾಮಸ್ಥರ ಮೂಲಕ ಸಂಧಾನ ಮಾಡಿ ಮತ್ತೆ ಮನೆಗೆ ಕರೆತಂದಿದ್ದ. ಅಂದಿನಿಂದ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ, ಮೇ 16ರಂದು ಎಲ್ಲರು ಮಲಗಿದ್ದ ವೇಳೆ ಪತ್ನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮಕ್ಕಳಿಗೆ ಎಚ್ಚರವಾಗಿ ನೋಡುತ್ತಿದ್ದಂತೆ ರಮೇಶ್​, ಬೈಕ್​ ತೆಗೆದುಕೊಂಡು ಅಲ್ಲಿಂದ ಪರಾರಿ ಆಗಿದ್ದಾನೆ.ಈ ವಿಚಾರವನ್ನು ಮಕ್ಕಳು ನೆರೆಮನೆಯವರಿಗೆ ತಿಳಿಸಿದ್ದಾರೆ. ತಕ್ಷಣ ಉಮಾಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಸಹ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆ ಸಂಬಂಧ ಸಿಲ್ವರ್​ ಮಾರ್ಕೆಟ್​ ಸ್ಟೇಷನ್​ನಲ್ಲಿ ಮೊಕದ್ದಮೆ ದಾಖಲಾಗಿದೆ. ಘಟನೆ ನಂತರ ಗಂಡ ಪಶ್ಚಾತ್ತಾಫ ವ್ಯಕ್ತಪಡಿಸಿಲ್ಲ ಆದರೆ ಸ್ಥಳೀಯರು ಇವನ ಅನುಮಾನ ಪ್ರವೃತ್ತಿಯನ್ನು ಟೀಕಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು