News Karnataka Kannada
Sunday, April 28 2024
ವಿದೇಶ

ನಾನು ಜಯಲಲಿತಾ ಮಗ, ಆಸ್ತಿಯೆಲ್ಲಾ ನನಗೆ ಸೇರಿದ್ದು: ಜಯಾ ಮಗ ಎಂದು ಮುಂದೆ ಬಂದ ವ್ಯಕ್ತಿ

Photo Credit :

ನಾನು ಜಯಲಲಿತಾ ಮಗ, ಆಸ್ತಿಯೆಲ್ಲಾ ನನಗೆ ಸೇರಿದ್ದು: ಜಯಾ ಮಗ ಎಂದು ಮುಂದೆ ಬಂದ ವ್ಯಕ್ತಿ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮರಣ ನಂತರ ಜಯಲಲಿತಾರನ್ನೇ ಹೋಲುವ ಯುವತಿಯೊಬ್ಬಳ ಚಿತ್ರ ಎಲ್ಲೆಡೆ ಪ್ರಚಾರವಾಗಿ ಆಕೆ ಜಯಾ ಅವರ ಮಗಳು ಎಂಬ ಸುದ್ದಿ ಹಬ್ಬಿತ್ತು. ಆದರೆ ಆಕೆ ಜಯಾ ಮಗಳಲ್ಲ, ಇದು ಸುಳ್ಳು ಸುದ್ದಿ ಎಂದು ಸಾಬೀತು ಆದ ನಂತರ ಇದೀಗ ಜಯಲಿಲಿತಾ ಅವರ ಮಗ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಮುಂದೆ ಬಂದಿದ್ದಾರೆ.

ಈರೋಡ್ ನಿವಾಸಿಯಾದ ಕೃಷ್ಣ ಮೂರ್ತಿ ಎಂಬವರು ತಾನು ಜಯಲಲಿತಾ ಅವರ ಪುತ್ರ. ತನ್ನ ಅಮ್ಮನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದಾರೆ. ನಾನು ಜಯಲಿಲತಾರ ಏಕೈಕ ಪುತ್ರನಾಗಿದ್ದು, ಜಯಾ ಸ್ನೇಹಿತೆ ವನಿತಾಮಣಿ ಅವರ ಮನೆಯಲ್ಲಿ ದತ್ತುಪುತ್ರನಾಗಿ ಬೆಳೆದಿದ್ದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.
2016 ಸಪ್ಟೆಂಬರ್ 14ರಂದು ಪೋಯಸ್ ಗಾರ್ಡನ್ನಲ್ಲಿರುವ ಮನೆಯಲ್ಲಿ ತಾನು ಜಯಾ ಅವರನ್ನು ಭೇಟಿಯಾಗಿದ್ದೆ.  ಜಯಲಲಿತಾ ಅವರೊಂದಿಗೆ ನಾನು ನಾಲ್ಕು ದಿನಗಳ ಕಾಲ ಇದ್ದೆ. ನಾನು ಆಕೆಯ ಪುತ್ರ ಎಂಬ ವಿಷಯವನ್ನು ಜಯಾ ಜನರಿಗೆ ಹೇಳಲು ಬಯಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಜಯಾ ಮತ್ತು ಶಶಿಕಲಾ ನಡುವೆ ವಾಗ್ವಾದ ನಡೆದಿದ್ದು ಶಶಿಕಲಾ ಅವರು ಜಯಾ ಮಹಡಿಯಿಂದ ದೂಡಿ ಕೆಳಗೆ ಬೀಳಿಸಿದ್ದರು. ಮೆಟ್ಟಿಲಿನಿಂದ ಕೆಳಗೆ ಬಿದ್ದ ಜಯಲಲಿತಾ ಅವರಿಗೆ ಗಾಯಗಳಾಗಿತ್ತು ಅಂತಾರೆ ಕೃಷ್ಣಮೂರ್ತಿ.

ಜೀವಭಯದ ಕಾರಣ ನಾನು ಇಲ್ಲಿಯವರೆಗೆ ಈ ವಿಷಯವನ್ನು ಹೇಳಲಿಲ್ಲ. ಆದರೆ ಈಗ ಧೈರ್ಯದಿಂದ ಮುಂದೆ ಬಂದಿದ್ದೇನೆ. ಜಯಲಿಲಿತಾ  ಅವರ ಏಕೈಕ ಪುತ್ರ ನಾನು ಅವರ ಆಸ್ತಿ ನನಗೇ ಸೇರಿದ್ದು ಎಂದು ಕೃಷ್ಣಮೂರ್ತಿ ವಾದಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು