ಹೊಸದಿಲ್ಲಿ : ದೆಹಲಿಯ ಬುರಾರಿಯಲ್ಲಿ ಇಡೀ ಜನತೆ ಬೆಚ್ಚಿ ಬೀಳುವಂತೆ ಮಾಡಿದ ಕರುಣಾ ಕೊಲೆಗೂ ಮುನ್ನ ಆರೋಪಿ ಸುರಿಂದರ್ ಸಿಂಗ್ ಪೋಲೀಸರಿಗೆ ಮೊದಲೇ ಫೋನ್ ಮಾಡಿ ತಿಳಿಸಿದ್ದ ಎಂದು ಹೇಳಲಾಗುತ್ತಿದೆ.ಕರುಣಾ ಹಾಗೂ ಸುರಿಂದರ್ ಸಿಂಗ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ಇಬ್ಬರ ನಡುವೆ ಜಗಳವಾಗಿದ್ದು, ಕರುಣಾ ಬೇರೆ ಮದುವೆಯಾಗುತ್ತಿರುವುದಾಗಿ ಸಂಶಯದಿಂದ ಕೊಲೆ ಮಾಡಿದ್ದಾನೆ ಹಾಗೂ ಪೂರಕವಾಗಿ ಆತನ ಫೇಸ್ ಬುಕ್ ನಲ್ಲಿ ಇಬ್ಬರು ಒಟ್ಟಿಗೆ ತೆಗೆದುಕೊಂಡಿರುವ ಸೆಲ್ಫೀ ಕೂಡ ಇದ್ದು, ಜಗಳವಾದ ಮೇಲೆ ಮಾತನಾಡದೆ ಸುರಿಂದರ್ ನ ಕಣ್ಣು ತಪ್ಪಿಸಿ ಕರುಣಾ ಓಡಾಡುತ್ತಿದ್ದಳು. ಕೋಪಗೊಂಡ ಸುರಿಂದರ್ ಬಿಯರ್ ಬಾಟಲಿಯಿಂದ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದ ಎಂದು ಹೇಳಲಾಗುತ್ತಿದೆ.
ಈತನಿಗೆ ಬೇರೆ ಹುಡುಗನಿಂದ ಕರುಣಾಳ ನ್ಯೂಡ್ ಫೋಟೋ ಸಿಕ್ಕಿದ್ದು, ಕರುಣಾ ಆತನೊಂದಿಗೆ ಸಂಪರ್ಕದಲ್ಲಿರುವ ವಿಷಯ ತಿಳಿದುಕೊಂಡ ಈತ ಹಾಡಹಗಲೇ ರಾಕ್ಷಸನಂತೆ ಕರುಣಾಳನ್ನು 24 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.