ನವದೆಹಲಿ: ನಗರದಲ್ಲಿ ಅಕ್ಟೋಬರ್ 31ರವರೆಗೂ ಪಟಾಕಿಗಳ ಮಾರಾಟವನ್ನು ನಿಷೇಧ ಮಾಡಬೇಕೆಂಬ ಸುಪ್ರೀಂಕೋರ್ಟ್ ತೀರ್ಪಿಗೆ ಬರಹಗಾರ ಚೇತನ್ ಭಗತ್ ತಮ್ಮ ಟ್ವೀಟ್ ನಲ್ಲಿ ದೀಪಾವಳಿಯಲ್ಲಿ ಪಟಾಕಿಗಳು ಬೇಕು. ಮಕ್ಕಳಿಗೆ ಪಟಾಕಿಗಳಿಲ್ಲದೆ ಏನು ದೀಪಾವಳಿ ಎಂದು ಆದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ.
ನಂತರ ಇವರ ಟ್ವೀಟ್ ಗಳು ವಿವಾದಾತ್ಮಕವಾಗಿದ್ದು ‘ಇಂತಹ ನಿಷೇದಜ್ಞೆಯನ್ನು ಕೇವಲ ಹಿಂದೂ ಸಂಪ್ರಾದಯವನ್ನು ಮೇಲೆ ಯಾಕೆ? ಹಾಗಿದ್ದರೆ ಮೊಹರಂ ಸಂದರ್ಭದಲ್ಲಿ ಮೇಕೆಯನ್ನು ಸಾಯಿಸುವುದನ್ನು ನಿಷೇಧಿಸಬಹುದೇ?. ದೀಪಾವಳಿಯಲ್ಲಿ ಪಟಾಕಿಗಳು ಇಲ್ಲದಿದ್ದರೆ, ಕ್ರಿಸ್ ಮಸ್ ಸಂದರ್ಭದಲ್ಲಿ ಕ್ರಿಸ್ ಮಸ್ ಟ್ರೀ ಮತ್ತು ಬಕ್ರೀದ್ ನಲ್ಲಿ ಮೇಕೆಗಳು ಇಲ್ಲದ ಹಾಗೇ. ಭಾರತೀಯ ಸಂಪ್ರದಾಯಗಳನ್ನು ನಿಷೇಧ ಮಾಡಬೇಡಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳಿಂದಾಗಿ ಕಳೆದ ವರ್ಷ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಗಾಳಿಯ ಗುಣಮಟ್ಟ ಕ್ಷೀಣಿಸಿದ್ದರಿಂದ ನಗರದಲ್ಲಿ ಅಕ್ಟೋಬರ್ 31ರವರೆಗೂ ಪಟಾಕಿಗಳ ಮಾರಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಲು ಸೋಮವಾರ ಆದೇಶ ಹೊರಡಿಸಿದೆ.
2016ರಲ್ಲಿ ಪಟಾಕಿಗಳನ್ನು ಸುಟ್ಟಿದ್ದರಿಂದ ವಿಶ್ವದಲ್ಲಿ ಈತನಕದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯಗೊಂಡ ನಗರ ಎಂಬ ಹೆಸರು ದೆಹಲಿಗೆ ಅಂಟಿಕೊಂಡಿತ್ತು. ಪಟಾಕಿಗಳ ಮಾರಾಟ ಪರವಾನಗಿಗಳನ್ನು ವಜಾಗೊಳಿಸಿ ಕಳೆದ ವರ್ಷ ನವೆಂಬರ್ 11ರಂದು ಹೊರಡಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಮೂರು ಸದಸ್ಯರ ನ್ಯಾಯಪೀಠ ಪುನಃ ಜಾರಿಗೆ ತಂದಿದೆ.