ನವದೆಹಲಿ: ನಗರದಲ್ಲಿ ಗುರುವಾರ ದಟ್ಟ ಮಂಜು ಆವರಿಸಿದ ಹಿನ್ನೆಲೆ 15 ರೈಲು ಸಂಚಾರಗಳಲ್ಲಿ ವಿಳಂಬವಾಗಿದೆ ಎಂದು ತಿಳಿದು ಬಂದಿದೆ.
3 ಗಂಟೆಗಳಲ್ಲಿ ಸುಮಾರು 15 ರೈಲು ಸಂಚಾರಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಮುಂದಿನ 5 ದಿನಗಳಲ್ಲಿ ದಟ್ಟ ಮಂಜು ಆವರಿಸಿಕೊಳ್ಳುವ ಸಾಧ್ಯತೆಗಳಿವೆ.
ವಾರಣಾಸಿ-ಡೆಲ್ಲಿ ಕಾಶಿ ವಿಶ್ವನಾಥ್ ಎಕ್ಸ್ ಪ್ರೆಸ್, ಮಲ್ಡಾ- ಡೆಲ್ಲಿ ಫ್ರಕ್ಕ ಎಕ್ಸ್ ಪ್ರೆಸ್, ಹೌರಹ್ ನ್ಯೂ ಡೆಲ್ಲಿ ಪೂರ್ವ ಎಕ್ಸ್ ಪ್ರೆಸ್, ಗಾಯ- ನ್ಯೂ ಡೆಲ್ಲಿ ಮಲಬೊಧಿ ಎಕ್ಸ್ ಪ್ರೆಸ್ ಒಳಗೊಂಡ 15 ರೈಲು ಸಂಚಾರಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.