ನವದೆಹಲಿ: ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ನೌಕಾ ದಳದ ಅಧಿಕಾರಿ ಕುಲಭೂಷಣ್ ಜಾಧವ್ ತೀವ್ರ ಒತ್ತಡದಲ್ಲಿದ್ದಾರೆ ಎಂದು ಭಾರತೀಯ ಉಪ ರಾಯಭಾರಿ ಗೌರವ್ ಅಹುವಾಲಿಯಾ ತಿಳಿಸಿದರು.
ಅಹುವಾಲಿಯಾ ಅವರು ನಿನ್ನೆ ಸುಮಾರು 12 ಗಂಟೆಗೆ ಜಾಧವ್ ಅವರನ್ನು ಭೇಟಿಯಾಗಿ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದರು.
ಈ ವೇಳೆ ಪಾಕಿಸ್ತಾನದ ಆರೋಪವನ್ನು ಒಪ್ಪಿಕೊಳ್ಳುವಂತೆ ಕುಲಭೂಷಣ್ ಮೇಲೆ ಅತಿಯಾದ ಒತ್ತಡ ಹೇರಲಾಗುತ್ತಿದೆ ಎಂದು ಅಹುವಾಲಿಯಾ ಅವರಿಗೆ ತಿಳಿಸಿರುವುದಾಗಿ ವಿದೇಶಾಂಗ ಇಲಾಖೆಯು ಹೇಳೀದೆ.