ನವದೆಹಲಿ: ಜನರಿಗೆ ಬೇಕಾಗಿರುವುದು ಸಾಲ ಅಲ್ಲ, ಅವರಿಗೆ ಹಣ ಬೇಕಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದ್ದು. ಇದರಲ್ಲಿ ವಿವಿಧ ಕಾರ್ಮಿಕರು ಹಾಗೂ ವಲಯಗಳಿಗೆ ಸಾಲ ನೀಡುವ ಘೋಷಣೆ ಮಾಡಲಾಗಿದೆ.
ಆದರೆ ಕೃಷಿ ಮತ್ತು ವಲಸೆ ಕಾರ್ಮಿಕರಿಗೆ ಹಣ ಬೇಕಾಗಿದೆ, ಸಾಲವಲ್ಲ ಮತ್ತು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಈ ಬಗ್ಗೆ ನಾನು ಮರುಚಿಂತನೆ ನಡೆಸಲು ತಿಳಿಸಿದ್ದೇನೆ ಎಂದರು.