ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ನಡೆದ ಕಾಲ್ತುಳಿತಕ್ಕೆ ಒಳಗಾಗಿ ಇಬ್ಬರು ಮೃತಪಟ್ಟರೆ, 33ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಚೆನ್ನೈಯ ರಾಜಾಜಿ ಹಾಲ್ ನ ಹೊರಗಡೆ ಸೇರಿದ್ದ ಡಿಎಂಕೆ ಅಭಿಮಾನಿಗಳು ಅಂತಿದರ್ಶನಕ್ಕೆ ನೂಕುನಗ್ಗಲು ನಡೆಸಿದ ಸಂದರ್ಭದಲ್ಲಿ ಇಬ್ಬರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಇಂದು ಸಂಜೆ ನಾಲ್ಕು ಗಂಟೆ ವೇಳೆಗೆ ಕರುಣಾನಿಧಿ ಅಂತ್ಯಕ್ರಿಯೆಯು ಮರೀನಾ ಬೀಚ್ ನಲ್ಲಿ ನಡೆಯಲಿದೆ.