ತಿರುವನಂತಪುರ: ಕೆಲವು ತುಂಡು ಬೆಳ್ಳಿಗಾಗಿ ಜೂಡಸ್ ಯೇಸುವಿಗೆ ಮೋಸ ಮಾಡಿದ್ದನು. ಅಂತೆಯೇ ಕೆಲವೇ ಚಿನ್ನದ ತುಂಡುಗಳಿಗಾಗಿ ಎಲ್ ಡಿ ಎಫ್ ಕೇರಳದ ಜನತೆಗೆ ಮೋಸ ಮಾಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಸುತ್ತಿರುವ ಬಿಜೆಪಿ ಅಭ್ಯರ್ಥಿ ಮೆಟ್ರೊಮ್ಯಾನ್ ಇ ಶ್ರೀಧರನ್ ಅವರನ್ನು ಸನ್ಮಾನಿಸಿ ಪ್ರಚಾರ ನಡೆಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಸಹಕಾರ ನೀಡಿ. ಕೇರಳದ ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಬಿನ್ನವಾದ ಯೋಜನೆಗಳನ್ನು ತರುತ್ತೇವೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಎಲ್ ಡಿ ಎಫ್ ಮತ್ತು ಯುಡಿಎಫ್ ಪರಸ್ಪರ ಒಪ್ಪಂದ ಮಾಡಿಕೊಂಡಿದೆ. ಇದು ಹಲವು ವರ್ಷಗಳಿಂದ ಗೌಪ್ಯವಾಗಿಟ್ಟಿದ್ದ ಸಂಗತಿಯಾಗಿದೆ. ಇದೇ ಮೊದಲ ಬಾರಿ ಕೇರಳದ ಜನತೆ ಗೊಂದಲಕ್ಕೊಳಗಾಗಿದೆ. ಎಲ್ ಡಿ ಎಫ್ ಮತ್ತು ಯುಡಿಎಫ್ ಯಾವ ರೀತಿ ಜನರ ದಿಕ್ಕನ್ನು ಬದಲಾಯಿಸುತ್ತಿದೆ ಅನ್ನುವುದನ್ನು ಜನರು ಆಲೋಚಿಸಿಲಾರಂಬಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೈತ್ರಿ ಮಾಡಿಕೊಂಡಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಯುಪಿಎ 1 ಮೈತ್ರಿಕೂಟದಲ್ಲಿ ಅವು ಮೈತ್ರಿ ಪಕ್ಷಗಳಾಗಿದ್ದವು. ಎಡಪಕ್ಷವು ಕಾಂಗ್ರೆಸ್ ನಿಂದ ಯುಪಿಎ 2 ಮೈತ್ರಿಕೂಟಕ್ಕೆ ತನ್ನ ಬೆಂಬಲ ನೀಡುತ್ತಲೇ ಇತ್ತು. ಆದರೇ ಕೇರಳದಲ್ಲಿ ಚುನಾವಣೆ ಸಂದರ್ಭದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಮೆಟ್ರೋಮ್ಯಾನ್ ಶ್ರೀಧರನ್ ದೇಶದ ಅಭಿವೃದ್ದಿಗಾಗಿ ಹಲವಾರು ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಎಲ್ಲ ವಿಭಾಗ ಜನರು ಅವರಿಗೆ ಗೌರವ ನೀಡುತ್ತಾರೆ. ಕೇರಳದ ಅಭಿವೃದ್ದಿಗಾಗಿ ಅವರು ಅಚಲ ನಿಲುವನ್ನು ಹೊಂದಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕೇರಳದ ವೇಗದ ಅಭಿವೃದ್ಧಿಗೆ ಕಾಲ ಸನ್ನಿಹಿತವಾಗಿದೆ. ಎಫ್ ಎ (ಮೀನುಗಾರಿಕೆ ಮತ್ತು ರಸಗೊಬ್ಬರ) ಕೃಷಿ ಮತ್ತು ಆಯುರ್ವೇದ ಎಸ್-ಕೌಶಲ ಅಭಿವೃದ್ದಿ ಮತ್ತು ಸಾಮಾಜಿಕ ನ್ಯಾಯ, ಟಿ-ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ ಅಭಿವೃದ್ಧಿಯಾಗಲಿದೆ ಎಂದು ಮೋದಿ ಜನರಿಗೆ ಭರವಸೆ ನೀಡಿದ್ದಾರೆ.
ರೈತರ ಕಲ್ಯಾಣ ಮತ್ತು ಕೃಷಿ ವಲಯದ ಅಭಿವೃದ್ಧಿಗಾಗಿ ಬಿಜೆಪಿ ಸರಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಲವು ವರ್ಷಗಳಿಂದ ಕನಿಷ್ಟ ಬೆಂಬಲ ಬೆಲೆ ಏರಿಕೆ ಮಾಡುವುದಾಗಿ ಭರವಸೆ ನೀಡಿತ್ತು. ನಮ್ಮ ಸರಕಾರ ಅದನ್ನು ನೆರವೇರಿಸಿದೆ ಎಂದು ಹೇಳಿದರು. ವಿಷಾದದ ಸಂಗತಿ ಏನೆಂದರೆ ಕೇರಳದ ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಎಲ್ ಡಿ ಎಫ್ ಮತ್ತು ಯುಡಿಎಫ್ ಯಾವುದೇ ರೀತಿಯ ಮೂಲ ಸೌಕರ್ಯಗಳನ್ನು ನೀಡುವ ಕೆಲಸ ಮಾಡುತ್ತಿಲ್ಲ. ತಂತ್ರಜ್ಞಾನದ ಅಭಿವೃದ್ಧಿಯಾಗಬೇಕೆಂದು ಬಿಜೆಪಿ ಪಕ್ಷದ ಬಯಕೆಯಾಗಿದೆ. ಎಡಪಕ್ಷಗಳು ಹಲವು ಬಾರಿ ಆಡಳಿತ ನಡೆಸಿದ್ದಲ್ಲದೆ, ಜೂನಿಯರ್ ಲೆವೆಲ್ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ.
ಕೇರಳದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಇವೆಲ್ಲವನ್ನೂ ನಿಲ್ಲಿಸುತ್ತವೆ. ನೆಲದ ಸಂಸ್ಕೃತಿಯನ್ನು ಎಲ್ ಡಿ ಎಫ್ ಮತ್ತು ಯುಡಿಎಫ್ ಪಕ್ಷಗಳು ಗೌರವಿಸುತ್ತಿಲ್ಲ. ಆ ಪಕ್ಷದ ನಾಯಕರು ಸಂಪ್ರದಾಯಗಳನ್ನು ಗೌರವಿಸುತ್ತಿಲ್ಲ. ಮುಗ್ಧ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿದಾಗ ಮೌನವಾಗಿದಕ್ಕೆ ನಾಚಿಕೆಯಾಗಬೇಕು ಎಂದು ಮಾತಿನ ಸವಾಲು ನೀಡಿದ್ದಾರೆ.