News Karnataka Kannada
Monday, May 13 2024
ವಿದೇಶ

`ಇಟಲಿಗೆ ತೆರಳಿ…’ ರಾಹುಲ್ ಗಾಂಧಿ ವಿರುದ್ಧ ಘೋಷಣೆ

Photo Credit :

`ಇಟಲಿಗೆ ತೆರಳಿ...' ರಾಹುಲ್ ಗಾಂಧಿ ವಿರುದ್ಧ ಘೋಷಣೆ

ಅಮೇಠಿ: ತನ್ನ ಸಂಸದೀಯ ಕ್ಷೇತ್ರ ಅಮೇಠಿಗೆ ಭೇಟಿ ನೀಡಿದ ಕಾಂಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.

ರಾಜೀವ್ ಗಾಂಧಿ ಫೌಂಡೇಶನ್ ಗೆ ಭೂಮಿ ನೀಡಿರುವ ಸಂತ್ರಸ್ತ ರೈತರು ತಮಗೆ ಉದ್ಯೋಗ ಒದಗಿಸಬೇಕು ಅಥವಾ ತಮ್ಮ ಭೂಮಿಯನ್ನು ವಾಪಸ್ ನೀಡಬೇಕು ಎಂದು ರೈತರು ಆಗ್ರಹಿಸಿದರು.

ಈ ಬಗ್ಗೆ ಮಾತನಾಡಿದ ಅಮೇಠಿಯ ರೈತ ಗೌರಿಗಂಜ್ ಅವರು, ನಮಗೆ ರಾಹುಲ್ ಗಾಂಧಿ ಅವರಿಂದ ತುಂಬಾ ಬೇಸರವಾಗಿದೆ. ಅವರು ಇಟಲಿಗೆ ಹಿಂತಿರುಗಲಿ. ಅವರು ಇಲ್ಲಿರಲು ಅರ್ಹರಲ್ಲ. ರಾಹುಲ್ ನಮ್ಮ ಭೂಮಿ ಕಬಳಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೋಕಸಭೆ ಚುನಾವಣೆಗೆ ಪ್ರಚಾರಕ್ಕೆ ಬಂದಿರುವಂತಹ ರಾಹುಲ್ ಗಾಂಧಿ ರೈತರ ಪ್ರತಿಭಟನೆ ಎದುರಿಸುವಂತಾಯಿತು.

ಅಮೇಠಿಯಲ್ಲಿ ಸಂಸತ್ತರಾಗಿದ್ದ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ಸಮರ್ಥ್ ಸೈಕಲ್ ಫ್ಯಾಕ್ಟರಿಗಾಗಿ ಶಿಲಾನ್ಯಾಸ ಮಾಡಿದ್ದರು. ಇದಕ್ಕಾಗಿ ಸುಮಾರು 65.57 ಎಕ್ರೆಯ ಜಮೀನನ್ನು 1980ರಲ್ಲಿ ಜೈನ್ ಸೋದರರು ಸ್ವಾದೀನ ಮಾಡಿಕೊಂಡಿದ್ದರು. ಆದರೆ ಕಂಪೆನಿಯು ನಷ್ಟವಾಗಿ 2014ರಲ್ಲಿ ಜಮೀನಿನ ಹರಾಜು ನಡೆದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು