News Karnataka Kannada
Monday, May 06 2024
ವಿದೇಶ

ಅಭಿನಂದನ್ ವರ್ಧಮಾನ್ ಗೆ ವೀರ ಚಕ್ರ ಪ್ರಶಸ್ತಿ

Photo Credit :

ಅಭಿನಂದನ್ ವರ್ಧಮಾನ್ ಗೆ ವೀರ ಚಕ್ರ ಪ್ರಶಸ್ತಿ

ನವದೆಹಲಿ: ಬಾಲಕೋಟ್ ನಲ್ಲಿ ಭಾರತವು ನಡೆಸಿದ ವಾಯುದಾಳಿ ಬಳಿಕ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು ಹೋಗಿ ಅಲ್ಲಿನ ನೆಲದಲ್ಲಿ ಬಂಧಿಯಾಗಿ 60 ಗಂಟೆಗಳ ಬಳಿಕ ಬಿಡುಗಡೆಯಾಗಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ನಾಳೆ 73ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವೀರ ಚಕ್ರ ಪ್ರದಾನ ಮಾಡಲಾಗುವುದು.

ವಾಯುಪಡೆಯ ಸ್ಕ್ವೆಡ್ರನ್ ಲೀಡರ್ ಮಿಂಟ್ರಿ ಅಗರ್ವಾಲ್ ಅವರಿಗೆ ಯುಧ ಸೇವಾ ಪದಕ ನೀಡಿ ಗೌಡವಿಸಲಾಗುತ್ತದೆ. ಫೆಬ್ರವರಿ 27ರಂದು ಪಾಕ್ ನೊಂದಿಗಿನ ವಿಷಮ ಪರಿಸ್ಥಿತಿ ವೇಳೆ ಅಗರ್ವಾಲ್ ಅವರು ವಾಯುಪಡೆಯನ್ನು ಮುನ್ನಡೆಸಿದ್ದರು.

ಇವರಿಬ್ಬರು ತಮ್ಮ ಕರ್ತವ್ಯದ ವೇಳೆ ಹೆಚ್ಚಿನ ಶೌರ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು