ನವದೆಹಲಿ: ಬಾಲಕೋಟ್ ನಲ್ಲಿ ಭಾರತವು ನಡೆಸಿದ ವಾಯುದಾಳಿ ಬಳಿಕ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು ಹೋಗಿ ಅಲ್ಲಿನ ನೆಲದಲ್ಲಿ ಬಂಧಿಯಾಗಿ 60 ಗಂಟೆಗಳ ಬಳಿಕ ಬಿಡುಗಡೆಯಾಗಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ನಾಳೆ 73ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವೀರ ಚಕ್ರ ಪ್ರದಾನ ಮಾಡಲಾಗುವುದು.
ವಾಯುಪಡೆಯ ಸ್ಕ್ವೆಡ್ರನ್ ಲೀಡರ್ ಮಿಂಟ್ರಿ ಅಗರ್ವಾಲ್ ಅವರಿಗೆ ಯುಧ ಸೇವಾ ಪದಕ ನೀಡಿ ಗೌಡವಿಸಲಾಗುತ್ತದೆ. ಫೆಬ್ರವರಿ 27ರಂದು ಪಾಕ್ ನೊಂದಿಗಿನ ವಿಷಮ ಪರಿಸ್ಥಿತಿ ವೇಳೆ ಅಗರ್ವಾಲ್ ಅವರು ವಾಯುಪಡೆಯನ್ನು ಮುನ್ನಡೆಸಿದ್ದರು.
ಇವರಿಬ್ಬರು ತಮ್ಮ ಕರ್ತವ್ಯದ ವೇಳೆ ಹೆಚ್ಚಿನ ಶೌರ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.