ಕಾಬೂಲ್ ; ಆಫ್ಘಾನಿಸ್ತಾನದ ಬಿಕ್ಕಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ತಲೆನೋವಾಗಿದ್ದು, ಜಿ-7 ರಾಷ್ಟ್ರಗಳ ನಡುವೆಯೇ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ.ಹೊಸ ಬೆಳವಣಿಗೆಯೊಂದರಲ್ಲಿ ಆಫ್ಘಾನಿಸ್ತಾನದ ಬಿಕ್ಕಟ್ಟು ಹಾಗೂ ಅಲ್ಲಿರುವ ವಿವಿಧ ದೇಶಗಳ ಪ್ರಜೆಗಳ ಸ್ಥಳಾಂತರ ಪ್ರಕ್ರಿಯೆಗೆ ಭಾರತ ಮುಂಚೂಣಿ ನಾಯಕತ್ವ ವಹಿಸಲು ಅವಕಾಶ ನೀಡಬೇಕು ಎಂಬ ಒತ್ತಡಗಳು ಜಿ7 ರಾಷ್ಟ್ರಗಳಲ್ಲಿ ಕೇಳಿ ಬಂದಿವೆ.
ಸುಮಾರು ಎರಡು ದಶಕಗಳ ಸುದೀರ್ಘ ಹೋರಾಟದಿಂದ ಹಿಂದೆ ಸರಿದಿರುವ ಅಮೇರಿಕ ತನ್ನ ಸೇನೆ ಹಿಂತೆಗೆತವನ್ನು ಘೋಷಿಸಿತ್ತು. ಆ ಬಳಿಕ ತಾಲಿಬಾಲಿಗಳ ಅಟ್ಟಹಾಸ ಹೆಚ್ಚಾಗಿದ್ದು, ಆ.15ರಂದು ಕಾಬೂಲನ್ನು ವಶಪಡಿಸಿಕೊಂಡಿದ್ದಾರೆ. ಆ ಮೂಲಕ ಆಫ್ಘಾನಿಸ್ತಾನದ ಪಂಜ್ಶೀರ್ ಪ್ರದೇಶ ಹೊರತುಪಡಿಸಿ ಉಳಿದೆಲ್ಲಾ ಭೂ ಭಾಗ ತಾಲಿಬಾನಿಗಳ ಹಿಡಿತದಲ್ಲಿವೆ.
ಅಫ್ಘಾನ್ ಬಿಕ್ಕಟ್ಟು : ವಿವಿಧ ದೇಶಗಳ ಪ್ರಜೆಗಳ ಸ್ಥಳಾಂತರಕ್ಕೆ ಭಾರತ ನಾಯಕತ್ವಕ್ಕೆ ಜಿ7 ರಾಷ್ಟ್ರಗಳ ಒತ್ತಾಯ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.