ಅಹ್ಮದಾಬಾದ್: ಸೋಮವಾರ ನಾಪತ್ತೆಯಾಗಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಅವರು ಅನಾರೋಗ್ಯದಿಂದ ಅಹ್ಮದಾಬಾದ್ ನ ಶಹಿಬಾಗ್ ಪ್ರದೇಶದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ತೊಗಾಡಿಯ ಅವರು ನಿನ್ನೆ ಸಂಜೆ ಪಾರ್ಕ್ ಗೆ ತೆರಳಿದ್ದು ಅಲ್ಲಿ ಅನಾರೋಗ್ಯವಾಗಿದ್ದು ಪ್ರಜ್ಞಾಹೀನರಾಗಿ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಸ್ಥಳೀಯರು ಅಹ್ಮದಾಬಾದ್ ನ ಚಂದ್ರಮಣಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಪ್ರಸ್ತುತ ತೊಗಾಡಿಯಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಚಂದ್ರಮಣಿ ಆಸ್ಪತ್ರೆಯ ನಿರ್ದೇಶಕ ರೂಪ್ ಕುಮಾರ್ ಅಗರ್ವಾಲ್ ಅವರು, ತೊಗಾಡಿಯಾ ಅವರು ಲೋ ಬ್ಲಡ್ ಶುಗರ್ ನಿಂದಾಗಿ ಬಳಲಿದ್ದಾರೆ. ಹೀಗಾಗಿ ಅವರು ಪಾರ್ಕ್ ನಲ್ಲಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿರಬಹುದು ಎಂದು ಹೇಳಿದ್ದಾರೆ.