ಕೇರಳ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ ದಕ್ಷಿಣ ಭಾರತ ಮಟ್ಟದ ಮಾನ್ಸೂನ್ ಕ್ರೀಡಾಕೂಟದಲ್ಲಿ ಮಂಗಳೂರು ವಿಜಯವಾಣಿ ಉದ್ಯೋಗಿ ಕಿರಣ್ ಪೈ ಅವರಿಗೆ 35 ವಯೋಮಿತಿ ವಿಭಾಗದ ಹ್ಯಾಮರ್ ನಲ್ಲಿ ಚಿನ್ನ (33.4 ಮೀ ವೈಯಕ್ತಿಕ ಬೆಸ್ಟ್) ಹಾಗೂ ಶಾಟ್ಪುಟ್ ಎಸೆತದಲ್ಲಿ (9.23 ಮೀ) ಬೆಳ್ಳಿ ಪದಕ ಲಭಿಸಿದೆ.
ದಕ್ಷಿಣ ಭಾರತದ ಕೇರಳ, ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡಿನ 250 ಕ್ಕೂ ಹೆಚ್ಚು ವಿವಿಧ ವಯೋಮಿತಿಯ ಅಥ್ಲಿಟ್ಸ್ ಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇದೇ ವರ್ಷ ಏಪ್ರಿಲ್ ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಕಿರಣ್ ಪೈ ಹ್ಯಾಮರ್ ಎಸೆತದಲ್ಲಿ ಕಂಚಿನ ಪದಕ ಪಡೆದಿದ್ದರು.