News Karnataka Kannada
Monday, April 29 2024
ಕ್ರೀಡೆ

ಆರ್​ಸಿಬಿ ತಂತ್ರಗಾರಿಕೆ ವಿರುದ್ಧ ಮಾಜಿ ಕ್ಯಾಪ್ಟನ್ ಅನಿಲ್ ಕುಂಬ್ಳೆ ಬೇಸರ

Kumb
Photo Credit : News Kannada

ಮುಂಬೈ: ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್​ನ ಮಾಜಿ ನಾಯಕ ಅನಿಲ್ ಕುಂಬ್ಳೆ ಆರ್​ಸಿಬಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಆಟಗಾರರ ಆಯ್ಕೆ ವಿಚಾರದಲ್ಲಿ ಆರ್​ಸಿಬಿ ಮಾಡಿದ ತಂತ್ರಗಾರಿಗೆ ಸರಿ ಇಲ್ಲ ಎಂದಿದ್ದಾರೆ.

ನಿನ್ನೆ ದುಬೈನ Coca-Cola Arenaದಲ್ಲಿ ಐಪಿಎಲ್ ಮಿನಿ ಹರಾಜು ನಡೆಯಿತು. ಈ ಪ್ರಕ್ರಿಯೆಯಲ್ಲಿ ಆರ್​ಸಿಬಿ ಆಟಗಾರರನ್ನು ಸರಿಯಾಗಿ ಆಯ್ಕೆ ಮಾಡಲಿಲ್ಲ. ಐಪಿಎಲ್ 2024 ರ ಹರಾಜಿನಲ್ಲಿ ಆರ್‌ಸಿಬಿ ಪ್ರದರ್ಶನದ ರೇಟಿಂಗ್ ಸರಿ ಇಲ್ಲ. ಏಕೆಂದರೆ ಅವರು ರಿಲೀಸ್ ಮಾಡಿರುವ ಆಟಗಾರರಿಗೆ ಸಮನಾಗಿ ಬದಲಾಯಿಸಲು ಆರ್‌ಸಿಬಿ ಗೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಹರಾಜಿನಲ್ಲಿ ರಿಲೀಸ್ ಮಾಡಿರುವ ಆಟಗಾರಗಿಂತ ಚೆನ್ನಾಗಿ ಪ್ರದರ್ಶನ ನೀಡುವ ಪ್ಲೇಯರ್ಸ್ ಆಯ್ಕೆ ಮುಖ್ಯವಾಗಿರುತ್ತದೆ. ಆರ್​ಸಿಬಿ ಹಸರಂಗ, ಹೇಜಲ್‌ವುಡ್ ಮತ್ತು ಹರ್ಷಲ್ ಪಟೇಲ್ ಅವರಂಥ ಬೌಲರ್ಸ್ ಬಿಡುಗಡೆ ಮಾಡಿದೆ. ಅವರಿಗಿಂತ ಉತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಆರ್​ಸಿಬಿಗೆ ಸ್ಪಿನ್ ಬೌಲರ್ಸ್​ ಅಗತ್ಯ ಇದೆ. ಅವರಲ್ಲಿ ಯಾವುದೇ ಸ್ಪಿನ್ನರ್ಸ್​ ಇಲ್ಲ.ಕಳೆದ ಋತುವಿನಲ್ಲಿ ಅಷ್ಟೇನೂ ಚೆನ್ನಾಗಿ ಆಡದ ಕರ್ಣ್ ಶರ್ಮಾ ಮೇಲೆ ಹೆಚ್ಚು ಒಲವು ತೋರಬೇಕಾಗುತ್ತದೆ. ಅವರು ಇಂಪ್ಯಾಕ್ಟ್ ಬೌಲರ್ ಆಗಿದ್ದರು. ಆದರೆ ಅವರು ಎಲ್ಲಾ ಪಂದ್ಯಗಳನ್ನು ಆಡಲಿಲ್ಲ. ಆದ್ದರಿಂದ ಸ್ಪಿನ್ನರ್ ಇಲ್ಲದೆ ಇದು ಸುಲಭವಲ್ಲ. ಹಾಗಾಗಿ ಹರಾಜು ವೇಳೆ ಆಟಗಾರರ ಖರೀದಿ ಸರಿ ಇದೆ ಎಂದು ನಾನು ಭಾವಿಸಲ್ಲ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು