ನವದೆಹಲಿ: ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿನ್ಹ್ ಅವರು ತಮ್ಮ ಮಗ ಮತ್ತು ಸೊಸೆ ರಿವಾಬಾ ಜಡೇಜಾ ಅವರ ವಿರುದ್ಧ ಹರಿಹಾಯ್ದಿದ್ದು, ತಮ್ಮ ಮಗನಿಗೆ ಮದುವೆ ಮಾಡಬಾರದಿತ್ತು ಎಂದು ನೋವು ಹೊರ ಹಾಕಿದ್ದಾರೆ.
ಅಂದ್ಹಾಗೆ, ಫೆಬ್ರವರಿ 2016ರಲ್ಲಿ, ಜಡೇಜಾ ಮೆಕ್ಯಾನಿಕಲ್ ಎಂಜಿನಿಯರ್ ರಿವಾಬಾ ಅವರೊಂದಿಗೆ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.ಎರಡು ತಿಂಗಳ ನಂತರ, ದಂಪತಿಗಳು ರಾಜ್ಕೋಟ್ನಲ್ಲಿ ಅದ್ದೂರಿಯಾಗಿ ವಿವಾಹವಾದರು.
ಜಡೇಜಾ-ರಿವಾಬಾ ಅವರ ಮದುವೆಯಾದ ನಂತರ ಅವರೊಂದಿಗಿನ ನಮ್ಮ ಸಂಬಂಧವು ಹದಗೆಡಲು ಪ್ರಾರಂಭಿಸಿತು ಎಂದು ಹೇಳಿದ್ದಾರೆ
“ನಾನು ನಿಮಗೆ ಒಂದು ಸತ್ಯವನ್ನ ಹೇಳಬೇಕು ಅಂದುಕೊಂಡಿದ್ದೇನೆ. ರವೀಂದ್ರ ಮತ್ತು ಅವರ ಪತ್ನಿ ರಿವಾಬಾ ಅವರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಾವು ಅವರನ್ನ ಕರೆಯುವುದಿಲ್ಲ ಮತ್ತು ಅವರು ನಮ್ಮನ್ನು ಕರೆಯುವುದಿಲ್ಲ. ಮದುವೆಯಾದ ಎರಡು ಅಥವಾ ಮೂರು ತಿಂಗಳ ನಂತರ ಸಮಸ್ಯೆಗಳು ಪ್ರಾರಂಭವಾದವು.
“ನಾನು ಪ್ರಸ್ತುತ ಜಾಮ್ನಗರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರೆ, ರವೀಂದ್ರ ತಮ್ಮದೇ ಆದ ಪ್ರತ್ಯೇಕ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇಬ್ಬರು ಒಂದೇ ನಗರದಲ್ಲಿ ವಾಸಿವಿದ್ರು, ನಾನು ಅವರನ್ನ ನೋಡುವುದಿಲ್ಲ. ಅವರ ಪತ್ನಿ ಅವರ ಮೇಲೆ ಏನು ಮ್ಯಾಜಿಕ್ ಮಾಡಿದ್ದಾರೆಂದು ನನಗೆ ತಿಳಿದಿಲ್ಲ” ಎಂದು ಜಡೇಜಾ ಅವರ ತಂದೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆಕೆ ನಮ್ಮ ಕುಟುಂಬದಲ್ಲಿ ಬಿರುಕು ಸೃಷ್ಟಿಸಿದಳು. ಅವನು ನನ್ನ ಮಗ ಮತ್ತು ಅದು ನನ್ನ ಹೃದಯವನ್ನ ಸುಡುತ್ತದೆ. ಆತ ಕ್ರಿಕೆಟಿಗನಾಗಿರದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಆದರೆ ಇದೆಲ್ಲವೂ ಸುಳ್ಳು ಸಂದರ್ಶನದಲ್ಲಿ ಒಂದು ಕಡೆಯಿಂದ ಅಷ್ಟೇ ನೋಡಿ ಹೀಗೆ ಬರೆಯಲಾಗಿದೆ. ಇದನ್ನು ನಂಬಬೇಡಿ ಎಂದು ರವೀಂದ್ರ ಜಡೇಜಾ ಅವರು ಬರೆದುಕೊಂಡಿದ್ದಾರೆ.