News Karnataka Kannada
Friday, May 03 2024
ಕ್ರೀಡೆ

ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೊಟ್ಟಿದ್ದನ್ನು ನಯವಾಗಿ ಅಲ್ಲಗೆಳೆದ ಗೌತಮ್ ಗಂಭೀರ್

Gautam Gambhir (1)
Photo Credit : Twitter

ಪಾಕಿಸ್ತಾನ ವಿರುದ್ಧ ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ ಕಿಂಗ್ ಕೊಹ್ಲಿಯನ್ನು ಪಂದ್ಯ ಶ್ರೇಷ್ಠರನ್ನಾಗಿ ಆಯ್ಕೆ ಮಾಡಲಾಯಿತು.  ಆದರೆ ಗಂಭೀರ್ ಮಾತ್ರ ಎಂದಿನಂತೆ ಕೊಹ್ಲಿ ವಿರುದ್ಧದ ಹೋರಾಟವನ್ನು ಈ ಪ್ರಶಸ್ತಿ ವಿಚಾರದಲ್ಲೂ ಮುಂದುವರೆಸಿದರು.

ಪಂದ್ಯ ಮುಗಿದ ಬಳಿಕ ಸ್ಟಾರ್ ಸ್ಪೋಟ್ಸ್ ಸಂದರ್ಶನದಲ್ಲಿ ಮಾತನಾಡುವ ವೇಳೆ ಗೌತಮ್ ಗಂಭೀರ್ ಅವರನ್ನು ಈ ಪಂದ್ಯದಲ್ಲಿ ನಿಮ್ಮ ಪ್ರಕಾರ ಯಾವ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಗಂಭೀರ್, ಕೊಹ್ಲಿಯನ್ನು ಬಿಟ್ಟು ಕುಲ್ದೀಪ್ ಯಾದವ್​ರನ್ನು ಆಯ್ಕೆ ಮಾಡಿದರು.

ಕುಲ್ದೀಪ್ ಪಾಕಿಸ್ತಾನದ ವಿರುದ್ಧ ಮೊದಲ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಅಲ್ಲದೆ ಆರಂಭದಲ್ಲೇ ಪಾಕ್ ಬ್ಯಾಟಿಂಗ್ ವಿಭಾಗದ ಬೆನ್ನೇಲುಬು ಮುರಿಯುವ ಮೂಲಕ ಪಾಕ್ ತಂಡಕ್ಕೆ ಗುರಿಯನ್ನು ಬೆನ್ನಟ್ಟುವ ಅವಕಾಶವನ್ನು ನೀಡಲಿಲ್ಲ. ಹೀಗಾಗಿ ನಾನು ಅವರನ್ನು ಪಂದ್ಯದ ಆಟಗಾರನಾಗಿ ಆಯ್ಕೆ ಮಾಡುವುದಾಗಿ ಹೇಳಿದರು.

ಅಲ್ಲದೆ ಸ್ಪಿನ್​ಗೆ ಉತ್ತಮವಾಗಿ ಆಡುವ ಪಾಕ್ ಬ್ಯಾಟರ್​ಗಳನ್ನು ಕುಲ್ದೀಪ್ ಬಲೆಗೆ ಕೆಡವಿದರು. ಅಲ್ಲದೆ ಸ್ಪಿನ್ ಗೆ ಉತ್ತಮವಾಗಿ ಆಡುವ ಪಾಕ್ ಬ್ಯಾಟರ್ ಗಳನ್ನು ಕುಲ್ದೀಪ್ ಬಲೆಗೆ ಕಡೆವಿದರು. ಪಾಕ್ ನ ಬ್ಯಾಟರ್‍ಗಳ ವಿರುದ್ದ ಈ ರೀತಿಯ ಪ್ರದರ್ಶನ ನೀಡಿದ್ದು ಇದೆಯಲ್ಲ ಅದು ಆಟವನ್ನು ಬದಲಾಯಿಸುವ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ವಿರಾಟ್ ಹಾಗೂ ರಾಹುಲ್ ಶತಕ ಸಿಡಿಸಿದ್ದಾರೆಂದು ನನಗೆ ತಿಳಿದಿದೆ. ರೋಹಿತ್ ಮತ್ತು ಶುಭ್​ಮನ್ ಗಿಲ್ ಕೂಡ ಅರ್ಧಶತಕಗಳಿಸಿದ್ದಾರೆ. ಆದರೆ ವೇಗದ ಬೌಲರ್​ಗಳಿಗೆ ನೆರವಾಗುವ ಅಂತಹ ವಿಕೆಟ್​ನಲ್ಲಿ ಕೇವಲ 8 ಓವರ್‌ಗಳಲ್ಲಿ ಐದು ವಿಕೆಟ್‌ ಪಡೆಯುವುದು, ವಿಶೇಷವಾಗಿದೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು