ಚೆನ್ನೈ: ಚೆನ್ನೈನ ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಮೊದಲ ಬಾರಿಸಿದ್ದು ಭಾರತ ತಂಡ ಎಂಬುದು ವಿಶೇಷ.
ಆದರೆ ಮೊದಲಾರ್ಧದಲ್ಲಿ ಈ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು. ಇದಾಗ್ಯೂ ದ್ವಿತಿಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿ ಟೀಮ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಈ ಪಂದ್ಯದ 9ನೇ ನಿಮಿಷದಲ್ಲಿ ಡ್ರ್ಯಾಗ್ ಫ್ಲಿಕ್ ಮೂಲಕ ಹರ್ಮನ್ಪ್ರೀತ್ ಚೆಂಡನ್ನು ಜುಗರಾಜ್ ಸಿಂಗ್ಗೆ ನೀಡಿದರು. ಈ ಅತ್ಯುತ್ತಮ ಪಾಸ್ ಅನ್ನು ಅದ್ಭುತವಾಗಿ ಡ್ರ್ಯಾಗ್ ಫ್ಲಿಕ್ ಮಾಡಿದ ಜುಗರಾಜ್ ಸಿಂಗ್ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಿದರು.
ದ್ವಿತಿಯಾರ್ಧದ ಆರಂಭದಲ್ಲಿ ಮಲೇಷ್ಯಾ ತಂಡ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ ಭಾರತೀಯ ಆಟಗಾರರು ಆಕ್ರಮಣಕಾರಿ ಆಟದೊಂದಿಗೆ ಮುನ್ನುಗ್ಗಿದರು. ಪರಿಣಾಮ 45ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಹರ್ಮನ್ಪ್ರೀತ್ ಸಿಂಗ್ ಗೋಲಾಗಿಸಿದರು.
ಇನ್ನು 56ನೇ ನಿಮಿಷದಲ್ಲಿ ಸುಖ್ಜೀತ್ ನೀಡಿದ ಉತ್ತಮ ಪಾಸ್ ಅನ್ನು ಆಕಾಶದೀಪ್ಗೆ ಶಾಟ್ ಮೂಲಕ ಗೋಲು ಬಲೆಯೊಳಗೆ ತಲುಪಿಸಿದರು.
ಈ ಮೂಲಕ ಮಲೇಷ್ಯಾ ತಂಡವನ್ನು 4-3 ಅಂತರದಿಂದ ಬಗ್ಗು ಬಡಿದು ಟೀಮ್ ಇಂಡಿಯಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.