ನವದೆಹಲಿ: ಮುರಳಿ ವಿಜಯ್ ಮತ್ತು ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಭಾರತ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಬಳಿಕ ತೃತೀಯ ಹಾಗೂ ಅಂತಿಮ ಟೆಸ್ಟ್ ನ ಮೊದಲ ದಿನ ನಾಲ್ಕು ವಿಕೆಟ್ ನಷ್ಟಕ್ಕೆ 371 ರನ್ ಮಾಡಿದೆ.
ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ನ ಮೊದಲ ದಿನದ ಅಂತ್ಯಕ್ಕೆ ಕೊಹ್ಲಿ 156 ಮತ್ತು ರೋಹಿತ್ ಶರ್ಮಾ ಆರು ರನ್ ಮಾಡಿ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.
ಆರಂಭಿಕ ಶಿಖರ್ ಧವನ್ ಹತ್ತನೇ ಓವರ್ ನಲ್ಲಿ ವಿಕೆಟ್ ಕಳಕೊಂಡ ಬಳಿಕ ಚೇತೇಶ್ವರ ಪೂಜಾರ 21ನೇ ಓವರ್ ನಲ್ಲಿ ನಿರ್ಗಮಿಸಿದರು. ಆದರೆ ಇದರ ಬಳಿಕ ಕಪ್ತಾನ ವಿರಾಟ್ ಕೊಹ್ಲಿ ಮತ್ತು ಮುರಳಿ ವಿಜಯ್ ಮೂರನೇ ವಿಕೆಟಿಗೆ 283 ರನ್ ಮಾಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಕೊಹ್ಲಿ ತನ್ನ 20ನೇ ಶತಕ ಪೂರೈಸಿದರು ಮತ್ತು ತನ್ನ 63ನೇ ಟೆಸ್ಟ್ ನಲ್ಲಿ ಐದು ಸಾವಿರ ರನ್ ಪೂರೈಸಿ ಈ ಸಾಧನೆ ಮಾಡಿ ಭಾರತದ 11ನೇ ಆಟಗಾರನಾದರು. ಇದೇ ವೇಳೆ ಮುರಳಿ ವಿಜಯ್ ತನ್ನ 11ನೇ ಶತಕ ದಾಖಲಿಸಿದರು.