ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರೋಚಕ ಹಣಾಹಣಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು. ಬುಧವಾರದಂದು ನಡೆದ ಬೆಂಗಳೂರು ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ ಸಿಕ್ಸರ್ ಸುರಿಮಳೆಯಾಗಿದ್ದು, ಹೊಸ ಐಪಿಎಲ್ ದಾಖಲೆ ನಿರ್ಮಾಣವಾಗಿದೆ.
ಆರ್.ಸಿ.ಬಿ ಪಾಲಾಗಬೇಕಿದ್ದ ಗೆಲುವನ್ನು, ಚೆನ್ನೈ ಪಾಲಾಗುವಂತೆ ಮಾಡುವಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಯಶಸ್ವಿಯಾದರು. ಗೆಲ್ಲಲು 206 ರನ್ ಗಳ ಗುರಿ ನೀಡಿದ್ದ ಆರ್.ಸಿ.ಬಿ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ ಗಳ ಅಂತರದಲ್ಲಿ ಗೆದ್ದುಕೊಂಡಿತು.
ಒಂದು ಹಂತದಲ್ಲಿ 74 ರನ್ ಗೆ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈ ತಂಡದ ಪಂದ್ಯಕ್ಕೆ ಚೇತೋಹಾರಿಯಾಗಿ ಅಂಬಟಿ ರಾಯುಡು ಮತ್ತು ಮಹೇಂದ್ರ ಸಿಂಗ್ ಧೋನಿ ಬಂದರು.
ಆರಂಭಿಕ ದಾಂಡಿಗ ಅಂಬಟಿ ರಾಯುಡು 53 ಎಸೆತಗಳಲ್ಲಿ 3 ಬೌಂಡರಿ ಬಾರಿಸಿ, 8 ಸಿಕ್ಸರ್ ಬಾರಿಸಿ ಒಟ್ಟು 82 ರನ್ ಗಳಿಸಿದರು. ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಔಟಾಗದೇ 34 ಎಸೆತಗಳಲ್ಲಿ 1 ಬೌಂಡರಿ, 7 ಸಿಕ್ಸರ್ ಗಳಿಸಿ 70 ರನ್ ಪಡೆದರು. ಇವರಿಬ್ಬರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಆರ್.ಸಿ.ಬಿ ವಿರುದ್ಧ ಚೆನ್ನೈ ತಂಡ ಭರ್ಜರಿ ಗೆಲುವು ದಾಖಲಿಸಿತು.
ಇನ್ನು ಆರ್.ಸಿ.ಬಿ ಪರ ಡಿವಿಲಿಯರ್ಸ್ 69 ರನ್ ಗಳಿಸಿ ಮಿಂಚಿದರು. ಉಮೇಶ್ ಯಾದವ್ ಮತ್ತು ಚಾಹಾಲ್ ಅತ್ಯುತ್ತಮ ಬೌಲಿಂಗ್ ಮಾಡಿ ಪ್ರಶಂಸೆ ಗಿಟ್ಟಿಸಿಕೊಂಡರು. 5ನೇ ಓವರ್ ನಲ್ಲಿ ನಾಯಕ ವಿರಾಟ್ ಕೊಹ್ಲಿ 18 ವಿಕೆಟ್ ಅನ್ನು ಕಳೆದುಕೊಂಡರು.