News Karnataka Kannada
Tuesday, May 07 2024
ಕ್ರೀಡೆ

ಟೀಂ ಇಂಡಿಯಾ ಬ್ಯಾಟ್ಸ್ ಮೆನ್ ಗಳ ಪೆವಿಲಿಯನ್ ಯಾತ್ರೆ: ಲಂಕಾಗೆ ಗೆಲುವು

Photo Credit :

ಟೀಂ ಇಂಡಿಯಾ ಬ್ಯಾಟ್ಸ್ ಮೆನ್ ಗಳ ಪೆವಿಲಿಯನ್ ಯಾತ್ರೆ: ಲಂಕಾಗೆ ಗೆಲುವು

ಧರ್ಮಶಾಲಾ: ಸುರಂಗ ಲಕ್ಮಲ್ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದ ಟೀಂ ಇಂಡಿಯಾ ಬ್ಯಾಟ್ಸ್ ಮೆನ್ ಗಳು ಕೇವಲ 112 ರನ್ ಗಳಿಗೆ ಗಂಟುಮೂಟೆ ಕಟ್ಟಿದ್ದು, ಶ್ರೀಲಂಕಾ ಮೊದಲ ಏಕದಿನ ಪಂದ್ಯವನ್ನು ಏಳು ವಿಕೆಟ್ ಗಳಿಂದ ಗೆದ್ದುಕೊಂಡಿದೆ.

ಇಲ್ಲಿ ನಡೆದ ಮೊದಲ ಏಕದಿನದಲ್ಲಿ ಆರಂಭದಲ್ಲೇ ಕುಸಿತಕ್ಕೆ ಒಳಗಾದ ಟೀಂ ಇಂಡಿಯಾ, ಎಂ.ಎಸ್. ಧೋನಿ 65 ರನ್ ನೆರವಿನಿಂದ ನೂರರ ಗಡಿದಾಟಿ ಲಂಕಾಗೆ 113 ರನ್ ಸವಾಲನ್ನಿಟ್ಟಿತ್ತು. ಇದಕ್ಕೆ ಉತ್ತರಿಸಿದ ಲಂಕಾ ಮೂರು ವಿಕೆಟ್ ಕಳಕೊಂಡು 20.4 ಓವರ್ ಗಳಲ್ಲಿ 114 ರನ್ ಮಾಡಿ ಗೆಲುವು ತನ್ನದಾಗಿಸಿಕೊಂಡಿತು. ಉಪುಲ್ ತರಂಗ 49 ಮತ್ತು ನಿರೊಶನ್ ಡಿಕ್ವೆಲ್26, ಆ್ಯಂಜಲೋ ಮ್ಯಾಥ್ಯೂಸ್ 25 ರನ್ ಬಾರಿಸಿದರು.

ಕಪ್ತಾನ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಡಿದ ಟೀಂ ಇಂಡಿಯಾ ಆರಂಭದಲ್ಲೇ ಕುಸಿತಕ್ಕೆ ಒಳಗಾದ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಮಧ್ಯಮ ಸರದಿಯಲ್ಲಿ ಧೋನಿ 65 ರನ್ ಮಾಡಿ ತಂಡಕ್ಕೆ ಆಸರೆಯಾದರು. ಸುರಂಗ ಲಕ್ಮಲ್ 13 ರನ್ ನೀಡಿ ನಾಲ್ಕು ಮತ್ತು ನುವಾನ್ ಪ್ರದೀಪ್ 37 ರನ್ ನೀಡಿ 2 ವಿಕೆಟ್ ಕಬಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು