News Karnataka Kannada
Thursday, May 02 2024
ಕ್ರೀಡೆ

ಬೆಂಗಳೂರು ತಂಡ ಸೇರಿದ ಮಾಜಿ ಆರ್ ಸಿಬಿ ಆಟಗಾರ ರಜತ್ ಪಾಟಿದಾರ್

Paatidar
Photo Credit :

ಮುಂಬೈ:  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಉಳಿದ ಪಂದ್ಯಗಳಿಗೆ  ರಜತ್ ಪಾಟಿದಾರ್ ಅವರನ್ನು ಸೇರಿಸಿಕೊಂಡಿದೆ.

ಗಾಯಗೊಂಡಿರುವ ಲವ್ನಿತ್ ಸಿಸೋಡಿಯಾ ಬದಲಿಗೆ ಪಾಟಿದಾರ್ ಆರ್ ಸಿಬಿ ಕ್ಯಾಂಪ್ ಸೇರಿದ್ದಾರೆ.

ದೇಶಿ ಕ್ರಿಕೆಟ್ ನಲ್ಲಿ ಮಧ್ಯ ಪ್ರದೇಶವನ್ನು ಪ್ರತಿನಿಧಿಸುವ ರಜತ್ ಪಾಟಿದಾರ್, 31 ಟಿ20 ಪಂದ್ಯಗಳಲ್ಲಿ 861 ರನ್ ಗಳಿಸಿದ್ದಾರೆ. ಇದರಲ್ಲಿ ಏಳು ಅರ್ಧಶತಕಗಳು ಸೇರಿವೆ. ಈ ಹಿಂದೆ ನಾಲ್ಕು ಬಾರಿ ಆರ್ ಸಿಬಿ ತಂಡದಲ್ಲಿದ್ದ ರಜತ್ ಈ ಬಾರಿಯ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದರು. ಇದೀಗ 20 ಲಕ್ಷ ರೂ ಮೂಲಬೆಲೆಗೆ ಮತ್ತೆ ಆರ್ ಸಿಬಿ ಕ್ಯಾಂಪ್ ಸೇರಿದ್ದಾರೆ.

2021ರ ಐಪಿಎಲ್ ಕೂಟದಲ್ಲಿ ರಜತ್ ಪಾಟಿದಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ನಾಲ್ಕು ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 114.5ರ ಸ್ಟ್ರೈಕ್ ರೇಟ್ ನಲ್ಲಿ 71 ರನ್ ಗಳಿಸಿದ್ದಾರೆ.

ಈ ಬಾರಿಯ ಕೂಟದಲ್ಲಿ ಆರ್ ಸಿಬಿ ತಂಡ ಎರಡು ಪಂದ್ಯವಾಡಿದ್ದು, ಒಂದು ಪಂದ್ಯ ಸೋತು ಮತ್ತೊಂದರಲ್ಲಿ ಗೆಲುವು ಕಂಡಿದೆ. ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ವಿರುದ್ಧ ಎಪ್ರಿಲ್ 5ರಂದು ವಾಂಖೆಡೆ ಮೈದಾನದಲ್ಲಿ ಆಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು