News Karnataka Kannada
Monday, May 13 2024
ಕ್ರೀಡೆ

ಕೊನೇ ಪಂದ್ಯ ಗೆದ್ದು ಘನತೆ ಉಳಿಸಿಕೊಂಡ ಕೊಹ್ಲಿ ಪಡೆ

Photo Credit :

ಕೊನೇ ಪಂದ್ಯ ಗೆದ್ದು ಘನತೆ ಉಳಿಸಿಕೊಂಡ ಕೊಹ್ಲಿ ಪಡೆ

ಕ್ಯಾನ್ಬೆರ್ರಾ: ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 13 ರನ್ ಗಳಿಂದ ಪರಾಭವಗಳಿಸಿದ ಟೀಂ ಇಂಡಿಯಾ ಸರಣಿ ಸೋಲುಂಡರೂ ಅಂತಿಮ ಪಂದ್ಯವನ್ನು ಗೆದ್ದು ಘನತೆ ಕಾಪಾಡಿದೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 1-2ರಿಂದ ಸರಣಿಯನ್ನು ಕಳಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಆರಂಭದಲ್ಲೇ ವಿಕೆಟ್ ಕಳಕೊಂಡ ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 302 ರನ್ ಪೇರಿಸಿತು. ಇದಕ್ಕೆ ಉತ್ತರಿಸಿದ ಆಸೀಸ್ 289 ರನ್ ಪೇರಿಸಲಷ್ಟೇ ಶಕ್ತವಾಯಿತು.

ಪಾಂಡೆ 92 ರನ್ ಮಾಡಿದರೆ, ಜಡೇಜಾ 66 ರನ್ ಬಾರಿಸಿದರು. ಇದಕ್ಕೆ ಮೊದಲು ನಾಯಕ ಕೊಹ್ಲಿ 78 ಎಸೆತಗಳಲ್ಲಿ 63 ರನ್ ಬಾರಿಸಿದರು. ಇದೇ ವೇಳೆ ಅವರು 12 ಸಾವಿರ ರನ್ ಪೂರೈಸಿದ ವಿಶ್ವದ ಆರನೇ ಆಟಗಾರನಾಗಿದ್ದಲ್ಲದೆ, ಸಚಿನ್ ತೆಂಡೂಲ್ಕರ್ ಗಿಂತಲೂ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು.

ದೊಡ್ಡ ಮೊತ್ತಕ್ಕೆ ಉತ್ತರಿಸಲು ಆರಂಭಿಸಿದ ಆಸ್ಟ್ರೇಲಿಯಾ ಸ್ಮಿತ್ ಕೇವಲ ಏಳು ರನ್ ಮಾಡಿ ನಿರ್ಗಮಿಸಿದರು. ಈ ಮೊದಲಿನ ಪಂದ್ಯದಲ್ಲಿ ಎರಡು ಶತಕ ಬಾರಿಸಿದ್ದ ಸ್ಮಿತ್ ಆಸೀಸ್ ಗೆಲುವಿನ ರೂವಾರಿಯಾಗಿದ್ದರು. ನಾಯಕ ಅರೋನ್ ಪಿಂಚ್ 82 ಎಸೆತಗಳಲ್ಲಿ 75 ರನ್ ಬಾರಿಸಿದರು. ಆದರೆ ಜಡೇಜಾ ಈ ವಿಕೆಟ್ ಕಬಳಿಸಿ ದೊಡ್ಡ ಆಘಾತ ನೀಡಿದರು.

ಇದರ ಬಳಿಕ ಆಸ್ಟ್ರೇಲಿಯಾದ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿ ಹಾಕುವಲ್ಲಿ ಟೀಂ ಇಂಡಿಯಾ ಬೌಲರ್ ಗಳು ಯಶಸ್ವಿಯಾದರು. ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಮತ್ತು ಸ್ಮಿತ್ ಸರಣಿ ಶ್ರೇಷ್ಠರಾದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು