ಬೆಂಗಳೂರು: ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡವನ್ನು ಕೆಪಿಎಲ್ ನಿಂದ ಕೈಬಿಡಲಾಗಿದ್ದು ಇದಕ್ಕೆ ತಂಡದ ನಾಯಕ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.
ತಂಡದ ನಾಯಕನಾದ ನನಗೆ ಒಂದು ಮಾತನ್ನಾದರೂ ತಿಳಿಸಬೇಕಿತ್ತು. ದಿಢೀರ್ ಅಂತ ತಂಡವನ್ನು ಕೈ ಬಿಟ್ಟಿರುವುದು ಸರಿಯಲ್ಲ ಎಂದು ಕೆಪಿಎಲ್ ನಿಂದ ತಮ್ಮ ತಂಡವನ್ನು ಕೈಬಿಟ್ಟಿರುವುದಕ್ಕೆ ತಂಡದ ನಾಯಕ ಸುದೀಪ್ ಹೇಳಿದ್ದಾರೆ.
ಗೂಗಲ್ ಪ್ಲಸ್ ಅಕೌಂಟ್ ನಲ್ಲಿ ಈ ಬಗ್ಗೆ ಕಿಚ್ಚ ಸುದೀಪ್ ದೀರ್ಘವಾದ ಪತ್ರವೊಂದನ್ನು ಬರೆದಿದ್ದಾರೆ. ಮಂಗಳೂರು ಯುನೈಟೆಡ್ ತಂಡ ಸಹ ಕೆಪಿಎಲ್ 6ನೇ ಆವೃತ್ತಿಯಿಂದ ದೂರ ಉಳಿಯಲಿವೆ ಎಂದು ಮೂಲಗಳು ತಿಳಿಸಿವೆ.