ಬೆಂಗಳೂರು: ಚುನಾವಣೆ ನಿಯಮಾವಳಿಗಳ ಪ್ರಕಾರ ನಡೆಸದಿದ್ದರೆ ರಾಜ್ಯ ಅಥ್ಲಿಟಿಕ್ ಸಂಸ್ಥೆಯ ವಿರುದ್ಧ ಮತ್ತೊಮ್ಮೆ ಬಾರಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂಸ್ಥೆಯ ಉಪಾಧ್ಯಕ್ಷರಲ್ಲಿ ಒಬ್ಬರಾಗಿರುವ ಅಥ್ಲೀಟ್ ಅಶ್ವಿನ ನಾಚಪ್ಪ ಅವರು ಜಿಲ್ಲಾ ಘಟಕಗಳ ಪದಾಧಿಕಾರಿಗಳಿಗೆ ಎಚ್ಚರಿಕೆಯ ಕರೆಯನ್ನು ನೀಡಿದ್ದಾರೆ.
ಇವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಜುಲೈನಲ್ಲಿ ನಿಯಮಾವಳಿಗಳ ಪ್ರಕಾರ ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ಅದಕ್ಕೆ ಅಡ್ಡಿ ಪಡಿಸಲಾಯಿತು. ಆ ಬಳಿಕ ಕಾನೂನು ಹೋರಾಟ ನಡೆಸಲಾಯಿತು.
ಚುನಾವಣೆಯನ್ನು ನಡೆಸಲು ನ್ಯಾಯಾಲಯ ಸೂಚಿಸಿತು. ಆದರೆ ಈಗ ಸಂಸ್ಥೆಯ ಉಪಾದ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ನಿಯಮಗಳನ್ನು ಗಾಳಿಗೆ ತೂರಿ ಚುನಾವಣೆ ನಡೆಸಲು ಆದೇಶ ಹೊರಡಿಸಿದ್ದಾರೆ. ಈ ಚುನಾವಣೇಯನ್ನು ನಡೆಸಲು ಬಿಡುವುದಿಲ್ಲ .