ಮಂಗಳೂರು: ಏಷ್ಯನ್ ಗೇಮ್ಸ್ನ ವನಿತೆಯರ ರಿಲೇಯಲ್ಲಿ ಚಿನ್ನ ಗೆದ್ದು ತವರಿಗೆ ಆಗಮಿಸಿದ ಕೊಡಗಿನ ಪೂವಮ್ಮ ಅವರನ್ನು ಗುರುವಾರ ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವಾ, ಶಾಸಕವೇದವ್ಯಾಸ್ ಕಾಮತ್, ಮಾಜಿ ಶಾಸಕ ಅಭಯಚಂದ್ರ ಜೈನ್, ಕಾರ್ಪೋರೇಟರ್ ರೂಪಾ ಡಿ ಬಂಗೇರ, ಪೂರ್ಣಿಮಾ ಸೇರಿದಂತೆ ಕುಟುಂಬ ಸದಸ್ಯರ ಪೂವಮ್ಮ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಪುಣೆಯಲ್ಲಿ ಈಚೆಗೆ ನಡೆದ ಏಷ್ಯನ್ ಚಾಂಪಿಯನ್ಷಿಪ್ನ 4×400 ಮೀ ರಿಲೇಯ ತಂಡದಲ್ಲಿ ಪೂವಮ್ಮ ಕೂಡ ಒಬ್ಬರಾಗಿದ್ದರು.