News Karnataka Kannada
Wednesday, May 08 2024
ಸಂಪಾದಕರ ಆಯ್ಕೆ

ಚೆನ್ನೈ: ಕರುಣೆ ರಹಿತ ಎಚ್‌. ಆರ್‌. ವಿಭಾಗ, ಏರ್‌ ಇಂಡಿಯಾ ಉದ್ಯೋಗಿಗಳಿಂದ ಟಾಟಾಗೆ ಪತ್ರ

Air India to get Rs 10 lakh DGCA imposes penalty
Photo Credit : IANS

ಚೆನ್ನೈ: ಏರ್ ಇಂಡಿಯಾದ ಪೈಲಟ್‌ಗಳು, ಟಾಟಾ ಸನ್ಸ್ ಲಿಮಿಟೆಡ್‌ ಅಧ್ಯಕ್ಷ ರತನ್‌ ಟಾಟಾ ಅವರಿಗೆ ಪತ್ರ ಬರೆದಿದ್ದು, ಟಾಟಾ ಒಡೆತನದ ಏರ್‌ಲೈನ್ಸ್‌ ಗಳಲ್ಲಿ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿ ತಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಟಾಟಾ ಗ್ರೂಪ್ ಗೌರವದ ಸ್ಥಾನವಿದೆ ಆದರೆ ಏರ್‌ ಇಂಡಿಯಾ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗ ತನ್ನ ಉದ್ಯೋಗಿಗಳಿಗೆ ಅರ್ಹ ಗೌರವ ನೀಡುತ್ತಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಉದ್ಯೋಗಿಗಳ ಬಗ್ಗೆ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಿಗೆ ಕಿಂಚಿತ್ತು ಕಾಳಜಿ ಇಲ್ಲ. ಮಾನವೀಯ ಮೌಲ್ಯಗಳು, ನೈತಿಕತೆಗೆ ಬೆಲೆಯೇ ಇಲ್ಲದಂತಾಗಿದೆ ಎಂದು ವಿವರಿಸಿದ್ದಾರೆ.

ನಮ್ಮ ಕಾಳಜಿಗಳನ್ನು ಪ್ರಸ್ತುತ ಮಾನವ ಸಂಪನ್ಮೂಲ ತಂಡವು ಕೇಳುತ್ತಿಲ್ಲ. ಈ ನಿಟ್ಟಿನಲ್ಲಿ ಏರ್ ಇಂಡಿಯಾದ ಉದ್ಯೋಗಿಗಳ ಸಮಸ್ಯೆಗೆ ತಮ್ಮಿಂದ (ರತನ್‌ ಟಾಟಾ) ಪರಿಹಾರ ದೊರೆಯಬಹುದು ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಈ ಹಿಂದೆ ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಷನ್ ಮತ್ತು ಇಂಡಿಯನ್ ಪೈಲಟ್ಸ್ ಗಿಲ್ಡ್ ಸಂಸ್ಥೆಗಳು ಟಾಟಾ ಗ್ರೂಪ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಿಗೆ ಪತ್ರ ಬರೆದಿದ್ದು, ಮಾನವ ಸಂಪನ್ಮೂಲ ವಿಭಾಗದ ನಂಬಿಕೆ ಕೊರತೆ, ಉದ್ಯೋಗಿಗಳನ್ನು ನಡೆಸಿಕೊಳ್ಳುತ್ತಿರುವ ವಿಧಾನದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು