ಮಂಗಳೂರು: 2025-2026 ರ ಅವಧಿಗೆ ಈ ಕೆಳಗಿನ ಮಹನೀಯರು ಪದಾಧಿಕಾರಿಗಳಾಗಿ ಆಯ್ಕೆಗೊಂಡರು. ಮಹಾಪೋಷಕರರು ಸಿಎ ಎಸ್.ಎಸ್ .ನಾಯಕ್ , ಹಿರಿಯ ಲೆಕ್ಕ ಪರಿಶೋಧಕರು , ಎಂ.ಎಸ್.ಎಂ.ಇ & ಸ್ಟಾರ್ಟ್ ಅಪ್ ಮಾರ್ಗದರ್ಶಕರು ಹಾಗೂ ಬಿಸಿನೆಸ್ ಕೋಚ್ , ಅಧ್ಯಕ್ಷರಾಗಿ ಯು . ರಾಮರಾವ್ ,

ಉಪಾಧ್ಯಕ್ಷರಾಗಿ S G ಹೆಗ್ಡೆ ನಿವೃತ್ತ ಜಂಟಿ ನಿರ್ದೇಶಕರು (  ಕೈಗಾರಿಕೆ ), ಕರ್ನಾಟಕ ಸರಕಾರ , ಕಾರ್ಯದರ್ಶಿಯಾಗಿ  ಡಾ . ಪಿ.ಜಿ.ಮಹೇಶ್ , ಸಹಾಯಕ ಪ್ರಾಧ್ಯಾಪಕರು  , ಎ.ಜೆ.ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ ,ಜೊತೆ ಕಾರ್ಯದರ್ಶಿಯಾಗಿ ರಘುರಾಮ್ ನಿವೃತ್ತ ಮಹಾ ಪ್ರಬಂಧಕರು , ಕರ್ಣಾಟಕ ಬ್ಯಾಂಕ್ , ಖಜಾಂಜಿಯಾಗಿ ಜಿ.ಗೋವಿಂದರಾಯ ಪ್ರಭು ನಿವೃತ್ತ ಪ್ರಬಂಧಕರು , ಕರ್ಣಾಟಕ ಬ್ಯಾಂಕ್ .

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಶಿಧರ ಕೆ. ಮೊೈಲಿ, ಮಧುಸೂಧನ್ ಭಂಡಾರ್ ಕರ್  , ಪಿ.ಕಾಶಿನಾಥ್ , ಕೆ.ಜಿ.ರಮೇಶ್ ರಾವ್ , ಎ. ಚಂದ್ರಶೇಖರ ಮಯ್ಯ  ಆಯ್ಕೆಯಾಗಿದ್ದಾರೆ . 
   
ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ 1960 ರಲ್ಲಿ ಸ್ಥಾಪಿತಗೊಂಡಿದೆ . ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್ ನೊಂದಿಗೆ ಸಂಯೋಜನೆಗೊಂಡಿರುತ್ತದೆ . ಜಿ ಎಸ್ ಟಿ, ಯೂನಿಯನ್ ಬಜೆಟ್ , ಹೂಡಿಕೆ , ಆರೋಗ್ಯ , ಎಂ.ಎಸ್.ಎಂ.ಇ,  ಬ್ಯಾಂಕಿಂಗ್ ಇತ್ಯಾದಿ ವಿಷಯಗಳ ಬಗ್ಗೆ ನಿರಂತರವಾಗಿ ಉಪನ್ಯಾಸ ಏರ್ಪಡಿಸುತ್ತಾ ಇದೆ .