ಯಾದಗಿರಿ: ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಹಿನ್ನೆಲೆ ಯಾದಗಿರಿ ಬಿಜೆಪಿ ಕಾರ್ಯಕರ್ತರಿಂದ ನಗರದ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ಭಾರತ್ ಮಾತೆ, ನರೇಂದ್ರ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತರು ಜೈಕಾರ ಕೂಗಿದರು. ನರೇಂದ್ರ ಮೋದಿ ಅವರಿಗೆ ದೇವರು ಆಯಸ್ಸು-ಆರೋಗ್ಯ ಕರುಣಸಲಿ, ಇನ್ನಷ್ಟು ದೇಶದ ಅಭಿವೃದ್ಧಿ ಮಾಡಲಿ ಎಂದು ಕಾರ್ಯಕರ್ತರಿಂದ ಪೂಜೆ ಸಲ್ಲಿಸಿದರು.
ಪೂಜೆ ಕೈಂಕರ್ಯದಲ್ಲಿ ಹಲವು ಬಿಜೆಪಿ ಕಾರ್ಯಕರ್ತರು ಭಾಗಿ ಇದೇ ಸಂದರ್ಭದಲ್ಲಿ ಲಿಂಗಪ್ಪ ಅತ್ತಿಮನಿ, ಭೀಮನಗೌಡ ಕ್ಯಾತ್ನಾಳ್ ಬಸವರಾಜ್ ಸೆಂಡರಿಗೆ, ಶಾಂತಗೌಡ ಪಗಲಾಪುರ್, ಸಾಮಿದೇವ್, ದರ್ಶನ್ ಕೆರೆ, ಸುರೇಶ್ ಆಕ, ಶರಣಗೌಡ ಅಲಿಪುರ್ ಇದ್ದರು.
Ad