ವಿಜಯಪುರ: ಇಂದು ವಿಜಯಪುರ ನಗರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಾಟಕ ಘನ ಸರ್ಕಾರದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಬಿ.ಝಡ್.ಜಮೀರ ಅಹ್ಮದಖಾನ್ ರವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಅಬ್ದುಲ್ ಹಮೀದ್ ಮುಶ್ರೀಫ್ ಇವರು ತಮ್ಮ ಅಪಾರವಾದ ಬೆಂಬಲಿಗರೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕನ್ನಾನ ಮುಶ್ರೀಫ್ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹ್ಮದ್ ರಫೀಕ್ ಟಪಾಲ್,
ಚಾಂದಸಾಬ ಗಡಗಲಾವ, ಮಹಾನಗರ ಪಾಲಿಕೆ ಉಪಮಹಾಪೌರ ದಿನೇಶ್ ಹಳ್ಳಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಅಬ್ದುಲ್ ರಜಾಕ್ ಹೋರ್ತಿ, ಆರತಿ ಶಹಾಪುರ,ಆಸೀಫ್ ಶಾನವಾಲೆ,ಅಪ್ಪು ಪುಜಾರಿ, ಶಫಿ ಮನಗೂಳಿ,ವಿದ್ಯಾರಾಣಿ ತುಂಗಳ, ವಸಂತ ಹೊನಮೊಡೆ, ಅಶ್ಫಾಕ್ ಮನಗೂಳಿ, ಶಫೀಕ್ ಬಗದಾದಿ, ಇಲಿಯಾಸ್ ಸಿದ್ದಿಕಿ,ಗಂಗುಬಾಯಿ ದುಮಾಳೆ, ಭಾರತಿ ಹೊಸಮನಿ, ಶಮೀಮಾ ಅಕ್ಕಲಕೋಟ, ಅಕ್ರಮ ಮಶಾಳಕರ, ಶಫೀಕ್ ಶೇಖ, ದಸ್ತಗಿರ್ ಸಾಲೋಟಗಿ, ಫೀರೂಜ ಶೇಖ್ ಕಾಂಗ್ರೆಸ್ ಪಕ್ಷದ ಮುಖಂಡರು ಗಳು. ಕಾರ್ಯಕರ್ತರುಗಳು ಅಭಿಮಾನಿಗಳು ಅಪಾರವಾದ ಸಂಖ್ಯೆಯಲ್ಲಿ ಭಾಗವಹಿಸಿದ್ದರು.