ಉಡುಪಿ: ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಕಾಡುಬೆಕ್ಕುನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಗಸ್ತು ಅರಣ್ಯಪಾಲಕ ಕಾಡುಬೆಕ್ಕನ್ನು ಚಿಕಿತ್ಸೆಗೆ ಒಳಪಡಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಕಲ್ಯಾಣಪುರ ಹಾಳೆಕಟ್ಟೆ ಬಳಿ ಬೀದಿನಾಯಿಗಳಿಂದ ಹಲ್ಲೆಗೊಳಗಾಗಿ ಕಾಡುಬೆಕ್ಕು ಗಾಯಗೊಂಡು ಗಂಭೀರ ಸ್ಥಿತಿಯಲ್ಲಿತ್ತು. ಗಮನಿಸಿದ ರವಿ ಮೆಸ್ಕಾಂ ಎನ್ನುವರು ಒಳಕಾಡುವರ ಗಮನಕ್ಕೆ ತಂದಿದ್ದರು.

