ತುಮಕೂರು : ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಕುಡಿದು ವಾಂತಿ ಬೇಧಿಯಿಂದ ಅಸ್ವಸ್ಥಗೊಂಡವರಲ್ಲಿ ಇದೀಗ ಮತ್ತೆ ಎರಡು ಮಂದಿ ಸಾವನಪ್ಪಿದ್ದು ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಚಿಕ್ಕದಾಸಪ್ಪ(76), ಪೆದ್ದಣ್ಣ(72) ಮೃತಪಟ್ಟಿದ್ದರು. ಅಸ್ತಮಾದಿಂದ ಹನುಮಕ್ಕ(80), ಮನೆಯಲ್ಲೇ ನಿಂಗಮ್ಮ(75), ಮದ್ಯವ್ಯಸನಿಯಾಗಿದ್ದ 75 ವರ್ಷದ ನಾಗಪ್ಪ, ಮನೆಯಲ್ಲೇ ವಾಂತಿ ಭೇದಿಯಾಗಿ ಮೀನಾಕ್ಷಿ(3) ಮೃತಪಟ್ಟಿದ್ದಾರೆ. ಆ ಮೂಲಕ 6 ಜನರ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ಘಟನೆ ಬಳಿಕ ಎಚ್ಚತ್ತ ಚಿನ್ನೆನಹಳ್ಳಿ ಗ್ರಾಮದಲ್ಲಿ ಡಿಸಿ ಶುಭಕಲ್ಯಾಣ್ ಹಾಗೂ ಜಿಪಂ ಸಿಇಒ ಪ್ರಭು ಎಡಿಸಿ ಶಿವಾನಂದ ಕರಾಳೆ ಎಸಿರಿಂದ ಗ್ರಾಮದ ಸರ್ಕಾರಿ ಶಾಲೆ ಬಳಿ ಸಭೆ ಮಾಡಿದ್ದು ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.
Ad