ಮೈಸೂರು: ನೆರಳು ಫೌಂಡೇಶನ್ 15ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದ ನಂಜುಮಳಿಗೆ ವೃತ್ತದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಲಾಯಿತು.
ನೆರಳು ಫೌಂಡೇಶನ್ ಅಧ್ಯಕ್ಷ ಜಿ ಎಂ ಪಂಚಾಕ್ಷರಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಸಾರ್ಥಕ ಬದುಕಿಗಾಗಿ ನಿಸ್ವಾರ್ಥ ಸೇವೆ ಮಾಡುವುದು ಅಗತ್ಯವಾಗಿದೆ ಹುಟ್ಟು-ಸಾವುಗಳ ಮಧ್ಯೆ ಪವಿತ್ರವಾದ ಬದುಕು ರೂಪಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ನೊಂದು- ಬೆಂದವರ, ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಛಲ ನಮ್ಮದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಡಾ ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ತೀರ್ಥ ಕುಮಾರ್, ಬೈರತಿ ಲಿಂಗರಾಜು, ಅಪೂರ್ವ ಸುರೇಶ್, ನಂದೀಶ್ ನಾಯಕ್, ಎಸ್ ಎನ್ ರಾಜೇಶ್, ಹಾಗೂ ಇನ್ನಿತರರು ಇದ್ದರು.