News Karnataka Kannada
Friday, May 03 2024
ಮೈಸೂರು

ಸಾಲಿಗ್ರಾಮ: ಕಾನೂನು ಪಾಲಿಸಲು ಪಿಎಸ್ ಐ ಕುಮುದ ಮನವಿ

PSI Kumuda appeals to follow law
Photo Credit :

ಸಾಲಿಗ್ರಾಮ: ಕಾನೂನನ್ನು ಸರ್ವರೂ ಪಾಲಿಸಬೇಕು ಎಂದು ಸಾಲಿಗ್ರಾಮ ಪೊಲೀಸ್ ಠಾಣೆಯ ನೂತನ ಪಿಎಸ್ ಐ ಎಸ್.ಕುಮುದ ಹೇಳಿದರು.

ಅವರು ಠಾಣೆಯಲ್ಲಿ ತಾಲ್ಲೂಕಿನ ದಲಿತ ಸಮುದಾಯದ ಮುಖಂಡರುಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವುದು ಕಂಡುಬಂದಲ್ಲಿ ತಕ್ಷಣ ನಮಗೆ ಮಾಹಿತಿ ನೀಡುವುದರ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರಲ್ಲದೆ, ಸ್ಕೂಟರ್ ಗಳಲ್ಲಿ 3ಜನ ಓಡಾಡಬಾರದು. ಕುಡಿದು ವಾಹನಗಳನ್ನು ಚಲಾಯಿಸಬಾರದು ಹಾಗೂ ಮಕ್ಕಳಿಗೆ ವಾಹನಗಳನ್ನು ಓಡಿಸಲು ನೀಡಬಾರದು ಎಂದರು. ಎಲ್ಲರೂ ಕೂಡ ನಿಯಮಗಳನ್ನು ಅನುಸರಿಸುವುದರ ಜೊತೆಗೆ ಬೇರೆಯವರಿಗೂ ಅದರ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ರಾಮಯ್ಯ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ  ರಾಂಪುರ ಲೋಕೇಶ್, ಗಂಗಾಧರ್, ಮಾಜಿ ಸದಸ್ಯ ಮಲುಗನಹಳ್ಳಿ ಡಿ.ದೇವರಾಜು, ಡಿಎಸ್ ಎಸ್ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಮುಖಂಡರಾದ ಜಗದೀಶ್, ಹರದನಹಳ್ಳಿ ಮಂಜು, ಲಕ್ಕಿಕುಪ್ಪೆ ರಮೇಶ್, ಗೋಪಾಲ್, ಅಪ್ಪಾಜಣ್ಣ,  ಬ್ರಿಜೇಶ್, ದೊಡ್ಡಕೊಪ್ಪಲು ಕಾಂತರಾಜು, ಕರ್ಪೂರವಳ್ಳಿ ಗೋವಿಂದರಾಜು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು