ಮೈಸೂರು: ಹಸಿರು ಟವಲ್ ಧರಿಸಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಆಗಮಿಸಿದ ರೈತರನ್ನು ಒಳ ಬಿಡಲು ನಿರಾಕರಿಸಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾರಾಜ ಕಾಲೇಜು ಮೈದಾನದ ಪ್ರವೇಶದ್ವಾರದಲ್ಲಿ ರೈತರಿಗೆ ಹಸಿರು ಟವಲ್ ತೆಗೆದು ಒಳ ಹೋಗುವಂತೆ ತಿಳಿಸಿದರು. ಅದಕ್ಕೆ ರೈತರು ಒಪ್ಪದಿದ್ದಾಗ ಪೊಲೀಸರು ಒತ್ತಾಯ ಪೂರ್ವಕವಾಗಿ ವಶಕ್ಕೆ ಪಡೆದರು.
ಈ ವೇಳೆ ನಾವು ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಎಂದೆಲ್ಲಾ ಹೇಳಿದರು. ಪ್ರವೇಶ ಮುಚ್ಚಿದ್ದರಿಂದ ಜನಸಂದಣಿ ಹೆಚ್ಚಾಯಿತು. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಒತ್ತಾಯಪೂರ್ವಕವಾಗಿ ಎಳೆದೊಯ್ದರು.