News Karnataka Kannada
Thursday, May 02 2024
ಮೈಸೂರು

ಬರಗಾಲದಲ್ಲಿಯೂ ಜನ ಖುಷಿಯಾಗಿದ್ದಾರಲ್ಲ ಅದೇ ನನಗೆ ಖುಷಿ: ಸಿಎಂ ಸಿದ್ದರಾಮಯ್ಯ

Https Newskannada.com Karnataka Mysuru People Are Happy Even In Drought But I Am Happy Cm Siddaramaiah 23102023
Photo Credit : News Kannada

ಮೈಸೂರು:  ರಾಜ್ಯದಲ್ಲಿ ಭೀಕರ ಬರಗಾಲದ ಸ್ಥಿತಿಯಿದೆ. ಜನರು ಕುಡಿಯುವ ನೀರಿಗೂ ಪರದಾಟ ಅನುಭವಿಸುತ್ತಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ‘ದಸರಾ ಅಂದರೆ ಜನರ ಹಬ್ಬ, ನಾಡಹಬ್ಬ, ಜನರು ಖುಷಿಯಾಗಿರುವುದು ಮುಖ್ಯ. ಆದರೆ ಈ ಬಾರಿ ಬರಗಾಲ ಬಂದಿದೆ. ಅದೇ ತೊಂದರೆ, ಅದರ ನಡುವೆಯೂ ಜನರು ಖುಷಿಯಲ್ಲಿರುವುದು ಸಂತೋಷದ ವಿಷಯ’ ಎಂದರು.

‘ಬರ ಪರಿಹಾರ ಕಾಮಗಾರಿಗಳು ನಡೆಯುತ್ತಲೇ ಇವೆ. ದುಡಿಯುವ ಕೈಗಳಿಗೆ ಕೆಲಸ ಕೊಡುತ್ತಿದ್ದೇವೆ. ಜನ-ಜಾನುವಾರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದೆ. ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ. ಎಷ್ಟೇ ಹಣ ಖರ್ಚಾದರೂ ಕೊಡುತ್ತೇವೆ ಎಂದು ಹೇಳಿದ್ದೇನೆ. ಮೇವಿಗೂ ಅಭಾವ ಅರಂಭವಾಗಿಲ್ಲ. ಸಾಕಷ್ಟು ಸಂಗ್ರಹವಿದೆ. ಹೊಸದಾಗಿ ಬೆಳೆಯಲು ಹಾಗೂ ಸಂಗ್ರಹಿಸಲು ಕೂಡ ಸೂಚನೆ ನೀಡಿದ್ದೇನೆ’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು