ಮೈಸೂರು: ನಾಡಿನ ಅನ್ನದಾತರಾದ ರೈತರ ಆರೋಗ್ಯ ವನ್ನು ಕಾಪಾಡುವ ಯಶಸ್ವಿ ಯೋಜನೆಯನ್ನು ರಾಜ್ಯದಲ್ಲಿ ಮತ್ತೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಖ್ಯ ಮಂತ್ರಿ ಯಾಗಿದ್ದ ಎಸ್.ಎಂ. ಕೃಷ್ಣ ಅವರು, ನಾಡಿನ ರೈತರ ಆರೋಗ್ಯ ಕಾಪಾಡಲು ಯಶಸ್ವಿ ಯೋಜನೆ ಜಾರಿಗೆ ತಂದರು. ಆದರೆ ಈ ಯೋಜನೆ ನಿಂತು ಹೋಗಿದೆ.
ಇದನ್ನು ಮತ್ತೆ ಜಾರಿಗೆ ತರಲ ಸಹಕಾರಿ ಸಚಿವರೊಂದಿಗೆ ಚರ್ಚಿಸಿದ್ದೇನೆ. ಆದರೆ ಈಗ ಕೋವಿಡ್ ಕಾರಣದಿಂದ ಹಣಕಾಸಿನ ಕೊರತೆ ಯಿದೆ. ಹಾಗಾಗಿ ಯೋಜನೆಯನ್ನು ಪುನರ್ ಪ್ರಾರಂಭ ಮಾಡಲು ಆಗಿಲ್ಲ. ಹಣಕಾಸು ಸ್ಥಿತಿ ಸುಧಾರಣೆ ಯಾದರೆ ಯಶಸ್ವಿ ಯೋಜನೆಯನ್ನು ಮತ್ತೆ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.